<p><strong>ನವದೆಹಲಿ: </strong>ಕೊರೊನಾ ವೈರಾಣು ವಿರುದ್ಧದ ಹೋರಾಟದ ಭಾಗವಾಗಿ ಏ.5ರಂದು ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ಮನೆಯ ಲೈಟುಗಳನ್ನು ಆರಿಸಿ, ಹಣತೆ– ಮೊಂಬತ್ತಿ ಬೆಳಗಿ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆ ಪರಿಣಾಮ, ದೇಶದ ಒಟ್ಟು ವಿದ್ಯುತ್ ಬೇಡಿಕೆಯಲ್ಲಿ 32,000 ಮೆಗಾವಾಟ್ನಷ್ಟು ಕುಸಿತ ಕಂಡು ಬಂದಿತ್ತು.</p>.<p>‘ವಿದ್ಯುತ್ ಬೇಡಿಕೆಯಲ್ಲಿ ಇಷ್ಟೊಂದು ಕುಸಿತ ಕಂಡು ಬಂದಿರುವುದು ಪ್ರಧಾನಿ ನೀಡಿದ್ದ ಕರೆಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದನ್ನು ತೋರುತ್ತದೆ’ ಎಂದು ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಟ್ವೀಟ್ ಮಾಡಿದ್ದಾರೆ.</p>.<p class="Subhead">ಉತ್ತರದಲ್ಲಿ ಉತ್ತಮ :ಪ್ರಧಾನಿ ಕರೆಗೆ ಉತ್ತರ ಭಾರತೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ದಕ್ಷಿಣ ಭಾರತೀಯರ ಮೇಲೆ ಈ ಕರೆ ಅಷ್ಟೊಂದು ಪ್ರಭಾವ ಬೀರಿಲ್ಲ ಎಂಬ ಕುತೂಹಲಕರ ಸಂಗತಿಯೂ ಗೊತ್ತಾಗಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.</p>.<p>ವಿದ್ಯುತ್ ಬೇಡಿಕೆಯಲ್ಲಿ ಉತ್ತರ ಭಾರತದಲ್ಲಿ ಶೇ 30.6ರಷ್ಟು ಕುಸಿತ ಕಂಡುಬಂದಿದ್ದರೆ, ದಕ್ಷಿಣ ಭಾರತದಲ್ಲಿ ಕುಸಿತದ ಪ್ರಮಾಣ ಶೇ 17.1ರಷ್ಟಿತ್ತು ಎಂದು ಪವರ್ ಸಿಸ್ಟಂಸ್ ಆಪರೇಷನ್ ಕಾರ್ಪೋರೇಷನ್ನ (ಪೊಸೊಕೊ) ಡಾಟಾ ವಿವರಿಸುತ್ತದೆ ಎಂದು ವರದಿಯಾಗಿದೆ.</p>.<p class="Subhead"><strong>ರಾಜ್ಯದಲ್ಲಿ 909 ಮೆಗಾವಾಟ್ವಿದ್ಯುತ್ ಬೇಡಿಕೆ ಕುಸಿತ: </strong>‘ರಾಜ್ಯದ ವಿದ್ಯುತ್ ಬೇಡಿಕೆ 7,116 ಮೆಗಾವಾಟ್ ಇತ್ತು. ಆದರೆ, 9.09ಕ್ಕೆ ಇದು 6,207 ಮೆಗಾವಾಟ್ಗೆ ಇಳಿಯಿತು. ಅಂದರೆ, ಈ ಸಮಯದಲ್ಲಿ ರಾಜ್ಯದ ವಿದ್ಯುತ್ ಬೇಡಿಕೆ 909 ಮೆಗಾವಾಟ್ನಷ್ಟು ಕಡಿಮೆಯಾಗಿತ್ತು’ ಎಂದು ಕೆಪಿಟಿಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೊರೊನಾ ವೈರಾಣು ವಿರುದ್ಧದ ಹೋರಾಟದ ಭಾಗವಾಗಿ ಏ.5ರಂದು ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ಮನೆಯ ಲೈಟುಗಳನ್ನು ಆರಿಸಿ, ಹಣತೆ– ಮೊಂಬತ್ತಿ ಬೆಳಗಿ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆ ಪರಿಣಾಮ, ದೇಶದ ಒಟ್ಟು ವಿದ್ಯುತ್ ಬೇಡಿಕೆಯಲ್ಲಿ 32,000 ಮೆಗಾವಾಟ್ನಷ್ಟು ಕುಸಿತ ಕಂಡು ಬಂದಿತ್ತು.</p>.<p>‘ವಿದ್ಯುತ್ ಬೇಡಿಕೆಯಲ್ಲಿ ಇಷ್ಟೊಂದು ಕುಸಿತ ಕಂಡು ಬಂದಿರುವುದು ಪ್ರಧಾನಿ ನೀಡಿದ್ದ ಕರೆಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದನ್ನು ತೋರುತ್ತದೆ’ ಎಂದು ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಟ್ವೀಟ್ ಮಾಡಿದ್ದಾರೆ.</p>.<p class="Subhead">ಉತ್ತರದಲ್ಲಿ ಉತ್ತಮ :ಪ್ರಧಾನಿ ಕರೆಗೆ ಉತ್ತರ ಭಾರತೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ದಕ್ಷಿಣ ಭಾರತೀಯರ ಮೇಲೆ ಈ ಕರೆ ಅಷ್ಟೊಂದು ಪ್ರಭಾವ ಬೀರಿಲ್ಲ ಎಂಬ ಕುತೂಹಲಕರ ಸಂಗತಿಯೂ ಗೊತ್ತಾಗಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.</p>.<p>ವಿದ್ಯುತ್ ಬೇಡಿಕೆಯಲ್ಲಿ ಉತ್ತರ ಭಾರತದಲ್ಲಿ ಶೇ 30.6ರಷ್ಟು ಕುಸಿತ ಕಂಡುಬಂದಿದ್ದರೆ, ದಕ್ಷಿಣ ಭಾರತದಲ್ಲಿ ಕುಸಿತದ ಪ್ರಮಾಣ ಶೇ 17.1ರಷ್ಟಿತ್ತು ಎಂದು ಪವರ್ ಸಿಸ್ಟಂಸ್ ಆಪರೇಷನ್ ಕಾರ್ಪೋರೇಷನ್ನ (ಪೊಸೊಕೊ) ಡಾಟಾ ವಿವರಿಸುತ್ತದೆ ಎಂದು ವರದಿಯಾಗಿದೆ.</p>.<p class="Subhead"><strong>ರಾಜ್ಯದಲ್ಲಿ 909 ಮೆಗಾವಾಟ್ವಿದ್ಯುತ್ ಬೇಡಿಕೆ ಕುಸಿತ: </strong>‘ರಾಜ್ಯದ ವಿದ್ಯುತ್ ಬೇಡಿಕೆ 7,116 ಮೆಗಾವಾಟ್ ಇತ್ತು. ಆದರೆ, 9.09ಕ್ಕೆ ಇದು 6,207 ಮೆಗಾವಾಟ್ಗೆ ಇಳಿಯಿತು. ಅಂದರೆ, ಈ ಸಮಯದಲ್ಲಿ ರಾಜ್ಯದ ವಿದ್ಯುತ್ ಬೇಡಿಕೆ 909 ಮೆಗಾವಾಟ್ನಷ್ಟು ಕಡಿಮೆಯಾಗಿತ್ತು’ ಎಂದು ಕೆಪಿಟಿಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>