ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ಅಶೋಕ್ ಗೆಹ್ಲೋಟ್, ’9 ರಾಜ್ಯಗಳ ಮುಖ್ಯಮಂತ್ರಿಗಳು ಕಾಯ್ದೆಗಳ ಪರವಾಗಿ ಇಲ್ಲ ಎಂಬುದನ್ನು ನೀವು ಆಲಿಸಲೇಬೇಕು. ಸಂಸತ್ನಲ್ಲಿ ನಿಮಗೆ ಬೆಂಬಲ ಸೂಚಿಸಿದ್ದ ಬಿಹಾರ ಹಾಗೂ ಒಡಿಸ್ಸಾ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿ ಕಾಯ್ದೆಗಳನ್ನು ಜಾರಿಗೊಳಿಸುವುದಿಲ್ಲ ಎಂದಿದ್ದಾರೆ. ನೀವು ಸಾರ್ವಜನಿಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈಗಿರುವ ಎನ್ಆರ್ಸಿ ಮತ್ತು ಸಿಎಎಗಳನ್ನ ಜಾರಿಗೊಳಿಸುವುದಿಲ್ಲ ಎಂಬುದಾಗಿ ಘೋಷಿಸಿ,’ ಎಂದು ಒತ್ತಾಯಿಸಿದ್ದಾರೆ.