ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ನಿಗೂಢತೆಯನ್ನು ಉಳಿಸಿಕೊಂಡಿರುವ ಎನ್ಸಿಪಿ ಮತ್ತು ಕಾಂಗ್ರೆಸ್ಪಕ್ಷಗಳು ಶಿವಸೇನಾದೊಂದಿಗೆ ಮೈತ್ರಿ ಮಾತುಕತೆ ನಡೆಸುತ್ತಲೇ ಇರುವ ಬೆನ್ನಲ್ಲೇ ಸೇನಾ ಸಂಸದ ಸಂಜಯ್ ರಾವುತ್, ಸರ್ಕಾರ ರಚನೆಗೆ ಇದ್ದ ಎಲ್ಲ ಅಡೆತಡೆಗಳು ಈಗ ಬಗೆಹರಿದಿವೆ ಮತ್ತು ನಾಳೆಯ ಹೊತ್ತಿಗೆ ಇದು ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ.