ಫುಲ್ಬನಿ (ಒಡಿಶಾ): ಆರ್ಟಿಐ ಕಾರ್ಯಕರ್ತ ಅಭಿಮನ್ಯು ಪಾಂಡ ಹತ್ಯೆಗೆ ಸಂಬಂಧಿಸಿ ಇಲ್ಲಿನ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಂಧಮಾಲ್ ಪೊಲೀಸ್ ವರಿಷ್ಠಾಧಿಕಾರಿ ಪ್ರತೀಕ್ ಸಿಂಗ್, ‘ಆರೋಪಿಗಳ ಬಳಿ ಇದ್ದ ಕಾಟ್ರಿಜ್, ಬೈಕ್ ಮತ್ತು ಆರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಾಗಿದೆ. ಹತ್ಯೆಗೆ ಹಳೆ ವೈಷಮ್ಯವೇ ಕಾರಣ’ ಎಂದು ತಿಳಿಸಿದರು.
ಡಿಸೆಂಬರ್ 10ರಂದು ಅಭಿಮನ್ಯು ಅವರನ್ನು ಬಲ್ಲಿಗುಡ ನಗರದಲ್ಲಿನ ಅವರ ಮನೆಯ ಬಳಿಯೇ ಹತ್ಯೆ ಮಾಡಲಾಗಿತ್ತು. ಹತ್ಯೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಬಲ್ಲಿಗುಡದ ಜನರಾಷ್ಟ್ರೀಯ ಹೆದ್ದಾರಿ–59 ಅನ್ನು ಬಂದ್ ಮಾಡಿ ಪ್ರತಿಭಟಿಸಿದ್ದರು.