ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ಪ್ರದೇಶದಲ್ಲಿ ಮೋರ್ಟರ್ ಶೆಲ್ ದಾಳಿ ನಡೆಸುವ ಮೂಲಕಪಾಕಿಸ್ತಾನದ ಸೇನೆ ಕದನ ವಿರಾಮ ಉಲ್ಲಂಘಿಸಿದೆ ಎಂದು ಭಾರತದ ಸೇನಾಪಡೆಯ ವಕ್ತಾರ ಹೇಳಿದ್ದಾರೆ.
2020 ಜೂನ್ 16ರಂದು ಮುಸ್ಸಂಜೆ ಪಾಕಿಸ್ತಾನ ನೌಗಮ್ ವಲಯದಲ್ಲಿ ಅಪ್ರಚೋದಿತವಾಗಿ ಮೋರ್ಟರ್ ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ತಕ್ಕ ಉತ್ತರವನ್ನು ಭಾರತೀಯ ಸೇನೆ ನೀಡಿದೆ ಎಂದು ಸೇನಾ ವಕ್ತಾರ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.