ವಾಣಿಜ್ಯ ನಗರಿ ಮುಂಬೈ, ಠಾಣೆ ಮೇಲೆ ಕಣ್ಣಿಟ್ಟು ಶಿವಸೇನೆ ಮತಗಳನ್ನು ಕಸಿಯಲು ತಂತ್ರ ಹೂಡಿದ ರಾಜ್ ಠಾಕ್ರೆ ಕೇವಲ 1 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ. ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಪಕ್ಷ 101 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಮರಾಠಿಗರ ಸ್ವಾಭಿಮಾನ ಅಭಿಯಾನದಲ್ಲಿ ತೊಡಗಿಕೊಂಡು ಮುಂಬೈನಲ್ಲಿ ವಲಸಿಗರ ವಿರುದ್ಧ ಕಿಡಿಕಾರುತ್ತಿದ್ದ ರಾಜ್ ಠಾಕ್ರೆಗೆ ಸ್ವತಹ ಮರಾಠಿಗರೇ ಕೈಹಿಡಿದಿಲ್ಲ!