ನವದೆಹಲಿ: ಕೇಂದ್ರ ಸಚಿವ ಸಂಪುಟ ಬುಧವಾರ ನವದೆಹಲಿಯಲ್ಲಿ ಸಭೆ ಸೇರಿದೆ. ಸಭೆಯ ನಂತರ ಶಾಸ್ತ್ರಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಪ್ರಕಾಶ್ ಜಾವಡೇಕರ್, ದೀಪಾವಳಿ ಉಡುಗೊರೆಯಾಗಿ ಕೇಂದ್ರ ಸರ್ಕಾರಿನೌಕರರತುಟ್ಟಿಭತ್ಯೆ ಶೇ.5ರಷ್ಟು ಏರಿಕೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದಿದ್ದಾರೆ.
📡LIVE Now #Cabinet Briefing by Union Minister @PrakashJavdekar
— PIB India (@PIB_India) October 9, 2019
at Shastri Bhawan, #NewDelhi
Watch on #PIB's
YouTube: https://t.co/ifeUVGLNib
Facebook: https://t.co/p9g0J6q6qvhttps://t.co/670sOskXH1
ಅದೇ ವೇಳೆ ಪಿಂಚಣಿದಾರರಿಗೂ ತುಟ್ಟಿ ಪರಿಹಾರ (ಡಿಆರ್) ಶೇ.5ಏರಿಕೆ ಮಾಡಲಾಗಿದೆ. 2019 ಜುಲೈ ತಿಂಗಳಿನಿಂದಲೇ ಇದು ಅನ್ವಯವಾಗಲಿದೆ.
7ನೇ ವೇತನ ಆಯೋಗದ ಶಿಫಾರಸು ಮೇರೆಗೆ ಕೇಂದ್ರ ಸರ್ಕಾರ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಿದೆ.
48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 62 ಲಕ್ಷ ಪಿಂಚಣಿದಾರರು ಇದರ ಫಲಾನುಭವಿಗಳಾಗಲಿದ್ದಾರೆ ಎಂದು ಜಾವಡೇಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯ ಮುಖ್ಯಾಂಶಗಳು
ಜಮ್ಮು ಕಾಶ್ಮೀರದಿಂದ ದೂರ ಹೋಗಿದ್ದು ಆಮೇಲೆ ಅಲ್ಲಿಗೆ ವಾಪಸ್ ಬಂದಿರುವ 5300 ಕುಟುಂಬಗಳಲ್ಲಿ ಪ್ರತಿ ಕುಟುಂಬಕ್ಕೆ 5.5 ಲಕ್ಷ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಐತಿಹಾಸಿಕ ತಪ್ಪೊಂದನ್ನು ಸರಿ ಮಾಡುವ ಪ್ರಕ್ರಿಯೆ ಎಂದು ಜಾವಡೇಕರ್ ಹೇಳಿದ್ದಾರೆ,
It has been decided that 5300 displaced families (from PoK), who had settled in regions others than J&K but later came to the state, will also be provided Rs 5.5 lakh each. This will provide justice to these displaced families: @PrakashJavdekar#JammuAndKashmir pic.twitter.com/iWtOXYRaaO
— moneycontrol (@moneycontrolcom) October 9, 2019
ಆಗಸ್ಟ್ 1, 2019ರ ನಂತರ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಯಾಗಬೇಕಿದ್ದರೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ. ಹೀಗೆ ಆಧಾರ್ಲಿಂಕ್ ಮಾಡಲಿರುವ ದಿನಾಂಕವನ್ನು 2019 ನವೆಂಬರ್ 30ರ ವರಗೆ ವಿಸ್ತರಿಸಲಾಗಿದೆ.
ರಾಬಿ ಬೆಳೆ ಬಿತ್ತನೆ ಆರಂಭವಾಗುತ್ತಿರುವುದರಿಂದ ದಿನಾಂಕ ವಿಸ್ತರಣೆ ಮಾಡಲಾಗಿದೆ ಎಂದಿದ್ದಾರೆ ಜಾವಡೇಕರ್. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ಈಗಾಗಲೇ 7 ಕೋಟಿ ರೈತರು ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ರೈತನಿಗೂ ಮೂರು ಕಂತುಗಳಲ್ಲಿ ₹6,000 ನೀಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.