ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌ ದಿನ ಮನೆಯಲ್ಲೇ ಪ್ರಾರ್ಥಿಸಿ: ತಬ್ಲೀಗಿ ನಾಯಕ ಮನವಿ

Last Updated 21 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ನವದೆಹಲಿ: ರಂಜಾನ್‌ ಸಂದರ್ಭದಲ್ಲಿ ಮನೆಯಲ್ಲೇ ಪ್ರಾರ್ಥನೆ ಮಾಡುವಂತೆ ತಬ್ಲೀಗ್‌ ಜಮಾತ್‌ ನಾಯಕ ಮೌಲಾನಾ ಸಾದ್‌ ಖಂಡಾಲ್ವಿ ಮನವಿ ಮಾಡಿದ್ದಾರೆ.

‘ಭಾರತ ಹಾಗೂ ಹೊರ ದೇಶದಲ್ಲಿರುವ ಎಲ್ಲ ಅನುಯಾಯಿಗಳು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ರಂಜಾನ್‌ ದಿನಗಳಲ್ಲಿ ಮನೆಯಿಂದಲೇ ಪ್ರಾರ್ಥನೆ ಮಾಡಬೇಕು. ಅಲ್ಲದೇ ಬೇರೆಯವರಿಗೆ ಮನೆಗೆ ಬರುವಂತೆ ಆಮಂತ್ರಣ ನೀಡಬಾರದು’ ಎಂದು ಅವರು ಹೇಳಿದ್ದಾರೆ.

ದೆಹಲಿಯನಿಜಾಮುದ್ದೀನ್‌ನಲ್ಲಿ ಧಾರ್ಮಿಕ ಸಭೆ ಆಯೋಜಿಸಿದ ಆರೋಪದಡಿ ಸಾದ್‌ ಸೇರಿದಂತೆ ಏಳು ಮಂದಿಯ ವಿರುದ್ಧದೆಹಲಿ ಪೊಲೀಸರು ಮಾ.31ರಂದು ಎಫ್‌ಐಆರ್‌ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT