ರೈತರು ಸಿಪಿಎಂ ಪರವಾಗಿ ನಿಂತಿರುವುದೇ ಇಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಿದ್ದು, ಈ ಬಾರಿ ಸಿಪಿಎಂ ಹಲವಾರು ರೈತ ಪರ ಹೋರಾಟಗಳನ್ನು ನಡೆಸಿತ್ತು.ರೈತರ ಸಾಲ ಮನ್ನಾ, ರೈತರಿಗೆ ನೀರಿನ ಸೌಕರ್ಯ ಒದಗಿಸುವುದು, ಹೆಚ್ಚಿಸಿದ ವಿದ್ಯುತ್ ದರದ ವಿರುದ್ಧ ಸಿಪಿಎಂ ಪ್ರತಿಭಟನೆ ನಡೆಸಿತ್ತು. ರೈತರ ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿ ವಸುಂಧರಾ ರಾಜೇ ₹50,000 ವರೆಗಿನ ಸಾಲ ಮನ್ನಾ ಮಾಡಿದ್ದರು.ಈ ರೀತಿಯ ರೈತ ಪರ ಹೋರಾಟದಿಂದಾಗಿ ರೈತರು ಇಲ್ಲಿ ಸಿಪಿಎಂ ಕೈ ಹಿಡಿದಿದ್ದಾರೆ.