<p><strong>ನವದೆಹಲಿ</strong>: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಬುಧವಾರ ರಾಜ್ಯಸಭೆ ಅಂಗೀಕರಿಸಿತು.</p>.<p>ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ಗದ್ದಲ, ಗಲಾಟೆ ನಡುವೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ಚಂದ ಗೆಹ್ಲೋಟ್ ‘ಸಂವಿಧಾನದ 124ನೇ ತಿದ್ದುಪಡಿ ಮಸೂದೆ–2019’ ಮಂಡಿಸಿದರು.</p>.<p>ಮಂಗಳವಾರ ಲೋಕಸಭೆ ಬಹುಮತದ ಅಂಗೀಕಾರ ಪಡೆದ ನಂತರ ಮಸೂದೆ ರಾಜ್ಯಸಭೆಗೆ ಬಂದಿದೆ. ಮಸೂದೆಗೆ ಅಂಗೀಕಾರ ಪಡೆಯುವ ಉದ್ದೇಶದಿಂದ ಸರ್ಕಾರ ರಾಜ್ಯಸಭೆಯ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಿತ್ತು.</p>.<p>ಅಧಿವೇಶನ ಅವಧಿ ವಿಸ್ತರಿಸಿದ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡವು.</p>.<p>‘ವಿರೋಧ ಪಕ್ಷಗಳ ಗಮನಕ್ಕೂ ತಾರದೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಸದನದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು, ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಯನ್ನು ಅವಮಾನಿಸಿದೆ’ ಎಂದು ಆರೋಪ ಮಾಡಿದವು.</p>.<p>ಕಾಂಗ್ರೆಸ್, ಟಿಎಂಸಿ, ಎಐಎಡಿಎಂಕೆ ಸದಸ್ಯರು ರಾಜ್ಯಸಭಾ ನಿಯಮಾವಳಿ ಪುಸ್ತಕ ತಮ್ಮ ಸಮರ್ಥನೆಗೆ ಪೂರಕವಾಗಿ ಬಳಸಿಕೊಂಡರು. ಇದು ತಮ್ಮಿಂದಾದ ವೈಯಕ್ತಿಕ ತಪ್ಪು ಎಂದು ಉಪ ಸಭಾಧ್ಯಕ್ಷ ಹರಿವಂಶ ಒಪ್ಪಿಕೊಂಡರು.</p>.<p>ಸಚಿವ ಅರುಣ್ ಜೇಟ್ಲಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿಜಯ್ ಗೋಯೆಲ್ ಉಪ ಸಭಾಧ್ಯಕ್ಷರ ಬೆಂಬಲಕ್ಕೆ ನಿಂತರು. ಕಲಾಪ ಸಲಹಾ ಮಂಡಳಿ ಸಭೆಯಲ್ಲಿ ಅಧಿವೇಶನ ವಿಸ್ತರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.</p>.<p>ಸದನವು ನಿಯಮಾವಳಿ ಪ್ರಕಾರ ನಡೆಯಬೇಕು ಮತ್ತು ಮಸೂದೆಯನ್ನು ಆಯ್ಕೆ ಸಮಿತಿ ಪರಿಶೀಲನೆಗೆ ಕಳಿಸಬೇಕು ಎಂದು ಡಿಎಂಕೆಯ ಕನಿಮೊಳಿ ಒತ್ತಾಯಿಸಿದರು. ಕಾಂಗ್ರೆಸ್ನ ಆನಂದ ಶರ್ಮಾ, ಎಎಪಿಯ ಸಂಜಯ ಸಿಂಗ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಅವರಿಗೆ ಬೆಂಬಲ ವ್ಯಕ್ತಪಡಿಸಿದರು.</p>.<p>ಮಸೂದೆಯನ್ನು ಆಯ್ಕೆ ಸಮಿತಿಗೆ ಕಳಿಸಲು ಉಪ ಸಭಾಧ್ಯಕ್ಷರು ನಿರಾಕರಿಸಿದರು. ಆಗ ಕನಿಮೊಳಿ ಅವರು ಬೇಡಿಕೆಯನ್ನು ಮತಕ್ಕೆ ಹಾಕುವಂತೆ ನಿರ್ಣಯ ಮಂಡಿಸಿದರು. ಆದರೆ, ವಿರೋಧ ಪಕ್ಷಗಳು ಅವರಿಗೆ ಬೆಂಬಲ ನೀಡಲಿಲ್ಲ.</p>.<p><strong>ಸಂಪ್ರದಾಯ ಉಲ್ಲಂಘನೆ:</strong> ‘ಸಂಸದೀಯ ಸ್ಥಾಯಿಸಮಿತಿಗಳ ಪರಿಶೀಲನೆಯ ನಂತರವಷ್ಟೇ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸುವುದು ವಾಡಿಕೆ. ರಾಜ್ಯಸಭೆ ರಬ್ಬರ್ ಸ್ಟ್ಯಾಂಪ್ ಅಲ್ಲ’ ಎಂದು ಆನಂದ ಶರ್ಮಾ ತರಾಟೆಗೆ ತೆಗೆದುಕೊಂಡರು.</p>.<p>ಸರ್ಕಾರ ಮೇಲ್ಜಾತಿ ಮೀಸಲಾತಿಯಲ್ಲಿ ರಾಜಕೀಯ ಮಾಡುತ್ತಿದೆ. ಲೋಕಸಭಾ ಚುನಾವಣೆಗೂ ಮುನ್ನ ಇದೊಂದು ರಾಜಕೀಯ ಗಿಮಿಕ್ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿದವು.</p>.<p>‘ಸರ್ಕಾರದ ಉದ್ದೇಶ ಉದಾತ್ತವಾಗಿದೆ. ಹೀಗಾಗಿ ಮಸೂದೆಯ ಉದ್ದೇಶವೂ ಒಳ್ಳೆಯದಾಗಿರುತ್ತದೆ’ ಎಂದು ಸಚಿವ ಗೆಹ್ಲೋಟ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.</p>.<p>ನೆರೆಯ ರಾಷ್ಟ್ರದ ಮುಸ್ಲಿಮೇತರರಿಗೆ ಪೌರತ್ವ ನೀಡುವ ಮಸೂದೆಗೆ ಸಂಬಂಧಿಸಿದಂತೆ ಗೃಹ ಸಚಿವ ರಾಜನಾಥ್ ಸಿಂಗ್ ಸದನದಲ್ಲಿ ಹೇಳಿಕೆ ನೀಡುವಂತೆ ಪಟ್ಟು ಹಿಡಿದ ಕಾಂಗ್ರೆಸ್, ಡಿಎಂಕೆ, ಆರ್ಜೆಡಿ, ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸಿದರು.</p>.<p><strong>ಮಾನದಂಡ ನಿಗದಿ ಪಡಿಸಲು ರಾಜ್ಯಗಳಿಗೆ ಮುಕ್ತ ಅವಕಾಶ</strong></p>.<p><strong>ನವದೆಹಲಿ:</strong> ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ವರ್ಗಗಳನ್ನು ಗುರುತಿಸುವ ಮಾನದಂಡ ನಿಗದಿ ಪಡಿಸಲು ರಾಜ್ಯಗಳಿಗೆ ಮುಕ್ತ ಅವಕಾಶವಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.</p>.<p>ಸಂವಿಧಾನದ 124ನೇ ತಿದ್ದುಪಡಿ ಮಸೂದೆ–2019 ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ, ‘ಮೀಸಲಾತಿಗೆ ಮಾನದಂಡ ನಿಗದಿಪಡಿಸಲು ಸಂವಿಧಾನವು ರಾಜ್ಯಗಳಿಗೆ ಅಧಿಕಾರ ನೀಡಿದೆ’ ಎಂದು ಅವರು ಹೇಳಿದರು.</p>.<p>ಈ ಮೀಸಲಾತಿ ಪಡೆಯಲು ₹8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು. ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರಬಾರದು ಎಂದು ಸೋಮವಾರ ನಡೆದಿದ್ದ ಕೇಂದ್ರ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿತ್ತು.</p>.<p>ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ₹5 ಲಕ್ಷ ವಾರ್ಷಿಕ ಆದಾಯ ಮೀರಿರಬಾರದು ಎಂದು ರಾಜ್ಯಗಳು ಮಾನದಂಡ ರೂಪಿಸಬಹುದು. ಈ ಮೀಸಲಾತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಕ್ಕೆ ಅನ್ವಯಿಸುತ್ತದೆ ಎಂದು ಪ್ರಸಾದ್ ಹೇಳಿದರು.</p>.<p>ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಸೂದೆ ಮಂಡಿಸಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದವು.‘ಹೌದು ನಮ್ಮಿಂದ ತಡವಾಗಿರಬಹುದು, ಆದರೆ,ಈ ಮಸೂದೆ ಮಂಡಿಸಲು ನಾವು ಧೈರ್ಯ ಮಾಡಿದ್ದೇವೆ’ ಎಂದು ಸಚಿವರು ತಿರುಗೇಟು ನೀಡಿದರು.</p>.<p><strong>ಸಂಸ್ಕೃತಿ ರಕ್ಷಣೆಗೆ ಬದ್ಧ: ರಾಜನಾಥ್</strong></p>.<p>‘ಈಶಾನ್ಯ ಭಾರತದ ಅಸ್ಮಿತೆ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಗೆ ತಿಳಿಸಿದರು.</p>.<p>‘ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಈಶಾನ್ಯ ಭಾರತದ ಜನರಲ್ಲಿ ತಪ್ಪುಗ್ರಹಿಕೆಗಳು ಹರಡಿವೆ. ಆದರೆ ಈ ಮಸೂದೆಯಿಂದ ಆ ಜನರಿಗೆ ಅನುಕೂಲವಾಗಲಿದೆ’ ಎಂದರು.</p>.<p>‘ಈ ಮಸೂದೆಯನ್ನು ವಿರೋಧಿಸಿ ಅಸ್ಸಾಂನಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದಿವೆ. ಈಶಾನ್ಯ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದೇನೆ’ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.</p>.<p>ಪರಿಸ್ಥಿತಿ ಈಗ ನಿಯಂತ್ರಣದಲ್ಲಿ ಇದೆ. ಆ ಪ್ರದೇಶಗಳಲ್ಲಿಶಾಂತಿ ನೆಲೆಸಬೇಕು. ಸ್ಥಳೀಯರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಬುಧವಾರ ರಾಜ್ಯಸಭೆ ಅಂಗೀಕರಿಸಿತು.</p>.<p>ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ಗದ್ದಲ, ಗಲಾಟೆ ನಡುವೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ಚಂದ ಗೆಹ್ಲೋಟ್ ‘ಸಂವಿಧಾನದ 124ನೇ ತಿದ್ದುಪಡಿ ಮಸೂದೆ–2019’ ಮಂಡಿಸಿದರು.</p>.<p>ಮಂಗಳವಾರ ಲೋಕಸಭೆ ಬಹುಮತದ ಅಂಗೀಕಾರ ಪಡೆದ ನಂತರ ಮಸೂದೆ ರಾಜ್ಯಸಭೆಗೆ ಬಂದಿದೆ. ಮಸೂದೆಗೆ ಅಂಗೀಕಾರ ಪಡೆಯುವ ಉದ್ದೇಶದಿಂದ ಸರ್ಕಾರ ರಾಜ್ಯಸಭೆಯ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಿತ್ತು.</p>.<p>ಅಧಿವೇಶನ ಅವಧಿ ವಿಸ್ತರಿಸಿದ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡವು.</p>.<p>‘ವಿರೋಧ ಪಕ್ಷಗಳ ಗಮನಕ್ಕೂ ತಾರದೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಸದನದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು, ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಯನ್ನು ಅವಮಾನಿಸಿದೆ’ ಎಂದು ಆರೋಪ ಮಾಡಿದವು.</p>.<p>ಕಾಂಗ್ರೆಸ್, ಟಿಎಂಸಿ, ಎಐಎಡಿಎಂಕೆ ಸದಸ್ಯರು ರಾಜ್ಯಸಭಾ ನಿಯಮಾವಳಿ ಪುಸ್ತಕ ತಮ್ಮ ಸಮರ್ಥನೆಗೆ ಪೂರಕವಾಗಿ ಬಳಸಿಕೊಂಡರು. ಇದು ತಮ್ಮಿಂದಾದ ವೈಯಕ್ತಿಕ ತಪ್ಪು ಎಂದು ಉಪ ಸಭಾಧ್ಯಕ್ಷ ಹರಿವಂಶ ಒಪ್ಪಿಕೊಂಡರು.</p>.<p>ಸಚಿವ ಅರುಣ್ ಜೇಟ್ಲಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿಜಯ್ ಗೋಯೆಲ್ ಉಪ ಸಭಾಧ್ಯಕ್ಷರ ಬೆಂಬಲಕ್ಕೆ ನಿಂತರು. ಕಲಾಪ ಸಲಹಾ ಮಂಡಳಿ ಸಭೆಯಲ್ಲಿ ಅಧಿವೇಶನ ವಿಸ್ತರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.</p>.<p>ಸದನವು ನಿಯಮಾವಳಿ ಪ್ರಕಾರ ನಡೆಯಬೇಕು ಮತ್ತು ಮಸೂದೆಯನ್ನು ಆಯ್ಕೆ ಸಮಿತಿ ಪರಿಶೀಲನೆಗೆ ಕಳಿಸಬೇಕು ಎಂದು ಡಿಎಂಕೆಯ ಕನಿಮೊಳಿ ಒತ್ತಾಯಿಸಿದರು. ಕಾಂಗ್ರೆಸ್ನ ಆನಂದ ಶರ್ಮಾ, ಎಎಪಿಯ ಸಂಜಯ ಸಿಂಗ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಅವರಿಗೆ ಬೆಂಬಲ ವ್ಯಕ್ತಪಡಿಸಿದರು.</p>.<p>ಮಸೂದೆಯನ್ನು ಆಯ್ಕೆ ಸಮಿತಿಗೆ ಕಳಿಸಲು ಉಪ ಸಭಾಧ್ಯಕ್ಷರು ನಿರಾಕರಿಸಿದರು. ಆಗ ಕನಿಮೊಳಿ ಅವರು ಬೇಡಿಕೆಯನ್ನು ಮತಕ್ಕೆ ಹಾಕುವಂತೆ ನಿರ್ಣಯ ಮಂಡಿಸಿದರು. ಆದರೆ, ವಿರೋಧ ಪಕ್ಷಗಳು ಅವರಿಗೆ ಬೆಂಬಲ ನೀಡಲಿಲ್ಲ.</p>.<p><strong>ಸಂಪ್ರದಾಯ ಉಲ್ಲಂಘನೆ:</strong> ‘ಸಂಸದೀಯ ಸ್ಥಾಯಿಸಮಿತಿಗಳ ಪರಿಶೀಲನೆಯ ನಂತರವಷ್ಟೇ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸುವುದು ವಾಡಿಕೆ. ರಾಜ್ಯಸಭೆ ರಬ್ಬರ್ ಸ್ಟ್ಯಾಂಪ್ ಅಲ್ಲ’ ಎಂದು ಆನಂದ ಶರ್ಮಾ ತರಾಟೆಗೆ ತೆಗೆದುಕೊಂಡರು.</p>.<p>ಸರ್ಕಾರ ಮೇಲ್ಜಾತಿ ಮೀಸಲಾತಿಯಲ್ಲಿ ರಾಜಕೀಯ ಮಾಡುತ್ತಿದೆ. ಲೋಕಸಭಾ ಚುನಾವಣೆಗೂ ಮುನ್ನ ಇದೊಂದು ರಾಜಕೀಯ ಗಿಮಿಕ್ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿದವು.</p>.<p>‘ಸರ್ಕಾರದ ಉದ್ದೇಶ ಉದಾತ್ತವಾಗಿದೆ. ಹೀಗಾಗಿ ಮಸೂದೆಯ ಉದ್ದೇಶವೂ ಒಳ್ಳೆಯದಾಗಿರುತ್ತದೆ’ ಎಂದು ಸಚಿವ ಗೆಹ್ಲೋಟ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.</p>.<p>ನೆರೆಯ ರಾಷ್ಟ್ರದ ಮುಸ್ಲಿಮೇತರರಿಗೆ ಪೌರತ್ವ ನೀಡುವ ಮಸೂದೆಗೆ ಸಂಬಂಧಿಸಿದಂತೆ ಗೃಹ ಸಚಿವ ರಾಜನಾಥ್ ಸಿಂಗ್ ಸದನದಲ್ಲಿ ಹೇಳಿಕೆ ನೀಡುವಂತೆ ಪಟ್ಟು ಹಿಡಿದ ಕಾಂಗ್ರೆಸ್, ಡಿಎಂಕೆ, ಆರ್ಜೆಡಿ, ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸಿದರು.</p>.<p><strong>ಮಾನದಂಡ ನಿಗದಿ ಪಡಿಸಲು ರಾಜ್ಯಗಳಿಗೆ ಮುಕ್ತ ಅವಕಾಶ</strong></p>.<p><strong>ನವದೆಹಲಿ:</strong> ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ವರ್ಗಗಳನ್ನು ಗುರುತಿಸುವ ಮಾನದಂಡ ನಿಗದಿ ಪಡಿಸಲು ರಾಜ್ಯಗಳಿಗೆ ಮುಕ್ತ ಅವಕಾಶವಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.</p>.<p>ಸಂವಿಧಾನದ 124ನೇ ತಿದ್ದುಪಡಿ ಮಸೂದೆ–2019 ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ, ‘ಮೀಸಲಾತಿಗೆ ಮಾನದಂಡ ನಿಗದಿಪಡಿಸಲು ಸಂವಿಧಾನವು ರಾಜ್ಯಗಳಿಗೆ ಅಧಿಕಾರ ನೀಡಿದೆ’ ಎಂದು ಅವರು ಹೇಳಿದರು.</p>.<p>ಈ ಮೀಸಲಾತಿ ಪಡೆಯಲು ₹8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು. ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರಬಾರದು ಎಂದು ಸೋಮವಾರ ನಡೆದಿದ್ದ ಕೇಂದ್ರ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿತ್ತು.</p>.<p>ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ₹5 ಲಕ್ಷ ವಾರ್ಷಿಕ ಆದಾಯ ಮೀರಿರಬಾರದು ಎಂದು ರಾಜ್ಯಗಳು ಮಾನದಂಡ ರೂಪಿಸಬಹುದು. ಈ ಮೀಸಲಾತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಕ್ಕೆ ಅನ್ವಯಿಸುತ್ತದೆ ಎಂದು ಪ್ರಸಾದ್ ಹೇಳಿದರು.</p>.<p>ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಸೂದೆ ಮಂಡಿಸಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದವು.‘ಹೌದು ನಮ್ಮಿಂದ ತಡವಾಗಿರಬಹುದು, ಆದರೆ,ಈ ಮಸೂದೆ ಮಂಡಿಸಲು ನಾವು ಧೈರ್ಯ ಮಾಡಿದ್ದೇವೆ’ ಎಂದು ಸಚಿವರು ತಿರುಗೇಟು ನೀಡಿದರು.</p>.<p><strong>ಸಂಸ್ಕೃತಿ ರಕ್ಷಣೆಗೆ ಬದ್ಧ: ರಾಜನಾಥ್</strong></p>.<p>‘ಈಶಾನ್ಯ ಭಾರತದ ಅಸ್ಮಿತೆ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಗೆ ತಿಳಿಸಿದರು.</p>.<p>‘ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಈಶಾನ್ಯ ಭಾರತದ ಜನರಲ್ಲಿ ತಪ್ಪುಗ್ರಹಿಕೆಗಳು ಹರಡಿವೆ. ಆದರೆ ಈ ಮಸೂದೆಯಿಂದ ಆ ಜನರಿಗೆ ಅನುಕೂಲವಾಗಲಿದೆ’ ಎಂದರು.</p>.<p>‘ಈ ಮಸೂದೆಯನ್ನು ವಿರೋಧಿಸಿ ಅಸ್ಸಾಂನಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದಿವೆ. ಈಶಾನ್ಯ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದೇನೆ’ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.</p>.<p>ಪರಿಸ್ಥಿತಿ ಈಗ ನಿಯಂತ್ರಣದಲ್ಲಿ ಇದೆ. ಆ ಪ್ರದೇಶಗಳಲ್ಲಿಶಾಂತಿ ನೆಲೆಸಬೇಕು. ಸ್ಥಳೀಯರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>