<p><strong>ನಾಗಪುರ:</strong> ರೈತರಿಗೆ ಸಹಾಯಧನ ನೀಡುವ ವಿಚಾರದ ಚರ್ಚೆಯ ವೇಳೆ, ಆಡಳಿತಾರೂಢ ಶಿವಸೇನಾ ಹಾಗೂ ಪ್ರತಿಪಕ್ಷ ಬಿಜೆಪಿಯ ಇಬ್ಬರು ಶಾಸಕರು ಪರಸ್ಪರ ಅಂಗಿಯ ಕಾಲರ್ ಹಿಡಿದು ಜಟಾಪಟಿ ನಡೆಸಿದ ಘಟನೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.</p>.<p>ಕಲಾಪ ಆರಂಭವಾಗುತ್ತಿದ್ದಂತೆ, ಬಿಜೆಪಿ ಶಾಸಕ ಅಭಿಮನ್ಯು ಪವಾರ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಂದೆ ಬ್ಯಾನರ್ ಪ್ರದರ್ಶಿಸಲು ಮುಂದಾದರು. ಅಕಾಲಿಕ ಮಳೆಯಿಂದ ತೊಂದರೆಗೊಳಗಾಗಿರುವ ರೈತರ ಪ್ರತಿ ಹೆಕ್ಟೇರ್ಗೆ ₹25 ಸಾವಿರ ಪರಿಹಾರ ನೀಡುವಂತೆ ಉದ್ಧವ್ ಠಾಕ್ರೆ ಅವರು ಈ ಹಿಂದೆ ಆಗ್ರಹಿಸಿದ್ದ ವರದಿಯು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯಯಲ್ಲಿ ಪ್ರಕಟವಾಗಿತ್ತು. ಆ ವರದಿಯ ಚಿತ್ರವಿದ್ದ ಬ್ಯಾನರ್ ಪ್ರದರ್ಶಿಸಲು ಅಭಿಮನ್ಯು ಯತ್ನಿಸಿದರು.</p>.<p>ಮುಖ್ಯಮಂತ್ರಿಯಾಗುವ ಮುನ್ನ ಠಾಕ್ರೆ ಅವರು ಸರ್ಕಾರದ ಮುಂದೆ ಇಟ್ಟಿದ್ದ ಬೇಡಿಕೆಯನ್ನು ಈಗ ಅವರಿಗೆ ನೆನಪಿಸುವುದು ತಮ್ಮ ಉದ್ದೇಶ ಎಂದು ಬಿಜೆಪಿ ಶಾಸಕ ಹೇಳಿದರು.</p>.<p>ಠಾಕ್ರೆ ಅವರ ಅಂದಿನ ಬೇಡಿಕೆಯನ್ನು ಜಾರಿಗೆ ತರುವಂತೆ ಸ್ಪೀಕರ್ ಆಸನದ ಮುಂದೆ ಜಮಾಯಿಸಿದ ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ವೇಳೆ ಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರು ಅಭಿಮನ್ಯು ಅವರಿಂದ ಬ್ಯಾನರ್ ಕಿತ್ತುಕೊಳ್ಳಲು ಮುಂದಾದರು. ಇಬ್ಬರೂ ಶಾಸಕರು ಪರಸ್ಪರ ಅಂಗಿ ಹಿಡಿದು ಎಳೆದಾಡಿಕೊಂಡರು.</p>.<p>ತಮ್ಮ ಆಸನಗಳಿಗೆ ಹಿಂದಿರುಗುವಂತೆ ಬಿಜೆಪಿ ಸದಸ್ಯರಿಗೆ ತಿಳಿಸಿದ ಸ್ಪೀಕರ್, ಕಲಾಪ ಮುಂದುವರಿಸಿದರು. ಸೇನಾ ಶಾಸಕರು ಬ್ಯಾನರ್ ಕಿತ್ತುಕೊಳ್ಳುವ ಯತ್ನ ಮುಂದುವರಿಸಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು. ಕಲಾಪವನ್ನು 30 ನಿಮಿಷ ಮುಂದೂಡಿದರು. </p>.<p>ಸದನ ಮತ್ತೆ ಸೇರಿದಾಗಲೂ ಪರಿಸ್ಥಿತಿ ಹಾಗೆಯೇ ಇತ್ತು. ಸ್ಪೀಕರ್ ನಾನಾ ಪಟೋಲೆ ಅವರು ಗದ್ದಲದ ಮಧ್ಯೆಯೇ ಕೆಲವು ಮಸೂದೆಗಳಿಗೆ ಅಂಗೀಕಾರ ಪಡೆದು, ಕಲಾಪವನ್ನು ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ:</strong> ರೈತರಿಗೆ ಸಹಾಯಧನ ನೀಡುವ ವಿಚಾರದ ಚರ್ಚೆಯ ವೇಳೆ, ಆಡಳಿತಾರೂಢ ಶಿವಸೇನಾ ಹಾಗೂ ಪ್ರತಿಪಕ್ಷ ಬಿಜೆಪಿಯ ಇಬ್ಬರು ಶಾಸಕರು ಪರಸ್ಪರ ಅಂಗಿಯ ಕಾಲರ್ ಹಿಡಿದು ಜಟಾಪಟಿ ನಡೆಸಿದ ಘಟನೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.</p>.<p>ಕಲಾಪ ಆರಂಭವಾಗುತ್ತಿದ್ದಂತೆ, ಬಿಜೆಪಿ ಶಾಸಕ ಅಭಿಮನ್ಯು ಪವಾರ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಂದೆ ಬ್ಯಾನರ್ ಪ್ರದರ್ಶಿಸಲು ಮುಂದಾದರು. ಅಕಾಲಿಕ ಮಳೆಯಿಂದ ತೊಂದರೆಗೊಳಗಾಗಿರುವ ರೈತರ ಪ್ರತಿ ಹೆಕ್ಟೇರ್ಗೆ ₹25 ಸಾವಿರ ಪರಿಹಾರ ನೀಡುವಂತೆ ಉದ್ಧವ್ ಠಾಕ್ರೆ ಅವರು ಈ ಹಿಂದೆ ಆಗ್ರಹಿಸಿದ್ದ ವರದಿಯು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯಯಲ್ಲಿ ಪ್ರಕಟವಾಗಿತ್ತು. ಆ ವರದಿಯ ಚಿತ್ರವಿದ್ದ ಬ್ಯಾನರ್ ಪ್ರದರ್ಶಿಸಲು ಅಭಿಮನ್ಯು ಯತ್ನಿಸಿದರು.</p>.<p>ಮುಖ್ಯಮಂತ್ರಿಯಾಗುವ ಮುನ್ನ ಠಾಕ್ರೆ ಅವರು ಸರ್ಕಾರದ ಮುಂದೆ ಇಟ್ಟಿದ್ದ ಬೇಡಿಕೆಯನ್ನು ಈಗ ಅವರಿಗೆ ನೆನಪಿಸುವುದು ತಮ್ಮ ಉದ್ದೇಶ ಎಂದು ಬಿಜೆಪಿ ಶಾಸಕ ಹೇಳಿದರು.</p>.<p>ಠಾಕ್ರೆ ಅವರ ಅಂದಿನ ಬೇಡಿಕೆಯನ್ನು ಜಾರಿಗೆ ತರುವಂತೆ ಸ್ಪೀಕರ್ ಆಸನದ ಮುಂದೆ ಜಮಾಯಿಸಿದ ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ವೇಳೆ ಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರು ಅಭಿಮನ್ಯು ಅವರಿಂದ ಬ್ಯಾನರ್ ಕಿತ್ತುಕೊಳ್ಳಲು ಮುಂದಾದರು. ಇಬ್ಬರೂ ಶಾಸಕರು ಪರಸ್ಪರ ಅಂಗಿ ಹಿಡಿದು ಎಳೆದಾಡಿಕೊಂಡರು.</p>.<p>ತಮ್ಮ ಆಸನಗಳಿಗೆ ಹಿಂದಿರುಗುವಂತೆ ಬಿಜೆಪಿ ಸದಸ್ಯರಿಗೆ ತಿಳಿಸಿದ ಸ್ಪೀಕರ್, ಕಲಾಪ ಮುಂದುವರಿಸಿದರು. ಸೇನಾ ಶಾಸಕರು ಬ್ಯಾನರ್ ಕಿತ್ತುಕೊಳ್ಳುವ ಯತ್ನ ಮುಂದುವರಿಸಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು. ಕಲಾಪವನ್ನು 30 ನಿಮಿಷ ಮುಂದೂಡಿದರು. </p>.<p>ಸದನ ಮತ್ತೆ ಸೇರಿದಾಗಲೂ ಪರಿಸ್ಥಿತಿ ಹಾಗೆಯೇ ಇತ್ತು. ಸ್ಪೀಕರ್ ನಾನಾ ಪಟೋಲೆ ಅವರು ಗದ್ದಲದ ಮಧ್ಯೆಯೇ ಕೆಲವು ಮಸೂದೆಗಳಿಗೆ ಅಂಗೀಕಾರ ಪಡೆದು, ಕಲಾಪವನ್ನು ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>