ಶುಕ್ರವಾರ ರಾತ್ರಿ ಬ್ರಜ್ಪಾಲ್ ಅವರು ಗೆಳೆಯನ ಜೊತೆ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ,ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೌತಮಬುದ್ಧ ನಗರದಲ್ಲಿ ಸ್ಥಳೀಯ ಪಕ್ಷದ ಮುಖಂಡನೊಬ್ಬನ ಹತ್ಯೆ ನಡೆದು 12 ಗಂಟೆಯೊಳಗೆ ಈ ದಾಳಿ ನಡೆದಿದೆ ಎಂದಿದ್ದಾರೆ.