ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿತಾಪುರ್‌ ಜೈಲಿಗೆ ಸಂಸದ ಆಜಂಖಾನ್‌, ಪತ್ನಿ, ಪುತ್ರ ಸ್ಥಳಾಂತರ

Last Updated 27 ಫೆಬ್ರುವರಿ 2020, 19:41 IST
ಅಕ್ಷರ ಗಾತ್ರ

ಸಿತಾಪುರ್: ರಾಂಪುರ್‌ ಕೋರ್ಟ್‌ನಲ್ಲಿ ಶರಣಾಗಿದ್ದ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್‌, ಅವರ ಪತ್ನಿ, ಪುತ್ರನನ್ನು ಸಿತಾಪುರ್‌ ಜೈಲಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಅವರನ್ನು ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಭೇಟಿಯಾದರು.

ಭೇಟಿಯ ಬಳಿಕ ಪ್ರತಿಕ್ರಿಯಿಸಿದ ಯಾದವ್‌, ‘ಪಕ್ಷದ ಸಂಸದನನ್ನು ಗುರಿಯಾಗಿಸಿ ಬಿಜೆಪಿ ಕೆಲಸ ಮಾಡುತ್ತಿದೆ. ಇದು ರಾಜಕೀಯ ಷಡ್ಯಂತ್ರವಾಗಿದೆ’ ಎಂದು ಆರೋಪಿಸಿದರು.

‘ಆಜಂ ಸಾಹೇಬ್‌ರನ್ನು ಭೇಟಿಯಾಗಿದ್ದೆ. ಅವರ ಪತ್ನಿ ಆರೋಗ್ಯ ಸರಿಯಾಗಿಲ್ಲ. ಪುತ್ರನ ಕೈಗೂ ಪೆಟ್ಟಾಗಿದೆ. ಜೈಲು ಆಡಳಿತ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲಿದೆ ಎಂದು ಭಾವಿಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಜಂ ಖಾನ್‌ರನ್ನು ಗುರಿಯಾಗಿಸಿದೆ. ನ್ಯಾಯಾಲಯ ಅವರ ನೆರವಿಗೆ ಬರಲಿದೆ ಎಂದು ಆಶಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT