ಸಾಮಾನ್ಯ ವರ್ಗದ ಅಭ್ಯರ್ಥಿಗಿಂತ, ಮೀಸಲಾತಿ ಅರ್ಹತೆ ಇರುವ ಅಭ್ಯರ್ಥಿಗೆ ಹೆಚ್ಚು ಅಂಕ ಇದ್ದರೆ ಅವರನ್ನು ಸಾಮಾನ್ಯ ಅಭ್ಯರ್ಥಿ ಎಂದೇ ಪರಿಗಣಿಸಬೇಕು ಎಂದು ವಿಕಾಸ್ ಸಂಖಾಲಾ ಮತ್ತು ವಿಕಾಸ್ ಕುಮಾರ್ ಅಗರ್ವಾಲ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಲಾಗಿದೆ. ವಯೋಮಿತಿ ಸಡಿಲಿಕೆ, ಕಡಿಮೆ ಅರ್ಹತಾ ಅಂಕಗಳು, ಅರ್ಜಿ ಶುಲ್ಕದ ವಿನಾಯಿತಿ ಇತ್ಯಾದಿ ವಿಶೇಷ ವಿನಾಯಿತಿ ಪಡೆದುಕೊಳ್ಳದಿದ್ದರೆ ಮಾತ್ರ ಇದು ಅನ್ವಯ ಎಂದು ಪೀಠವು ಸ್ಪಷ್ಟಪಡಿಸಿದೆ.