ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಯು.ಯು.ಲಲಿತ್ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಅಲ್ಲದೆ, ಮದರಸಾ ಆಯೋಗ ಕಾಯ್ದೆ 2008 ಅಸಂವಿಧಾನಿಕವಾಗಿದ್ದು, ಸಂವಿಧಾನಬದ್ಧವಾದ ಸಿಂಧುತ್ವ ಹೊಂದಿಲ್ಲ ಎಂದುಕೊಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದು ಮಾಡಿದೆ. ಮದರಸಾ ವ್ಯವಸ್ಥಾಪನಾ ಮಂಡಳಿ ಆಯ್ಕೆ ಮಾಡಿದ್ದ ಉದ್ಯೋಗಗಳು ಸಿಂಧುತ್ವ ಹೊಂದಿವೆ. ಕಾಯ್ದೆ ಪ್ರಕಾರ ಮದರಸಾಗಳಿಗೆ ಶಿಕ್ಷಕರಆಯ್ಕೆಯನ್ನೂ ಆಯೋಗವೇ ನಿರ್ಧರಿಸಬಹುದು ಎಂದು ಅಭಿಪ್ರಾಯಪಟ್ಟಿದೆ.