ಶಿವಸೇನಾ–ಎನ್ಸಿಪಿ–ಕಾಂಗ್ರೆಸ್ ಸರ್ಕಾರವು ಆರು ತಿಂಗಳೂ ಸಹ ಉಳಿಯುವುದಿಲ್ಲ ಎಂದು ಊಹಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿಯ ದೇವೇಂದ್ರ ಫಡಣವಿಸ್ ಅವರನ್ನು ಅಣಕಿಸಿದ ಪವಾರ್, 'ದೇವೇಂದ್ರ ಅವರನ್ನು ಕೆಲವು ವರ್ಷಗಳಿಂದ ಬಲ್ಲೆ. ಆದರೆ, ಅವರು ಜ್ಯೋತಿಶಾಸ್ತ್ರದ ವಿದ್ಯಾರ್ಥಿಯೂ ಎಂಬುದು ತಿಳಿದಿರಲಿಲ್ಲ' ಎಂದಿದ್ದಾರೆ.