ಭಾನುವಾರ ಭೋಪಾಲ್ನ ಈಶಾನ್ಯ ಭಾಗದಲ್ಲಿರುವ ಖುಜುರಾವೋದಲ್ಲಿ ಜನ ಆಶೀರ್ವಾದ್ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಚೌಹಾಣ್, ನಮ್ಮಲ್ಲಿ ಗೋವು ಸಂವರ್ಧನ್ ಮಂಡಳಿ ಇದೆ. ಆದರೆ ಗೋವು ಸಚಿವಾಲಯವೊಂದಿದ್ದರೆ ಉತ್ತಮ ಎಂದು ನನ್ನ ಅನಿಸಿಕೆ. ಮಂಡಳಿಗೆ ಆರ್ಥಿಕ ನಿರ್ಬಂಧಗಳಿವೆ, ಆದರೆ ಸಚಿವಾಲಯದಲ್ಲಿ ಈ ರೀತಿ ಇರಲ್ಲ.ಗೋಶಾಲೆಗಳು ಉತ್ತಮ ಯೋಚನೆಯೇ ಆಗಿದ್ದರೂ, ಹಸುಗಳನ್ನು ಮನೆಯಲ್ಲಿ ಸಾಕಿದರೆ ಒಳ್ಳೆಯದು ಎಂದುಅಭಿಪ್ರಾಯಪಟ್ಟಿದ್ದಾರೆ.