ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗೋವು ಸಚಿವಾಲಯ'ಕ್ಕೆ ಚಿಂತನೆ ನಡೆಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್

Last Updated 1 ಅಕ್ಟೋಬರ್ 2018, 1:19 IST
ಅಕ್ಷರ ಗಾತ್ರ

ಸಾಗರ್: ಚುನಾವಣೆಗೆ ಸಿದ್ಧವಾಗಿರುವ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ಚೌಹಾಣ್ಗೋವು ಸಚಿವಾಲಯ ರೂಪಿಸುವ ಚಿಂತನೆ ನಡೆಸಿದ್ದಾರೆ.ಪ್ರಸ್ತುತವಿರುವ ಗೋವು ಸಂವರ್ಧನ್ ಮಂಡಳಿಯ ಬದಲಿಗೆ ಈ ರೀತಿ ಗೋವು ಸಚಿವಾಲಯ ರೂಪಿಸುವ ಯೋಜನೆ ಇದೆ ಎಂದು ಅವರು ಹೇಳಿದ್ದಾರೆ.

ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್ ಅವರು ರಾಜ್ಯದಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ಗೋವು ಆಶ್ರಯ ತಾಣವನ್ನು ನಿರ್ಮಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಚೌಹಾಣ್ ಭಾನುವಾರ ಈ ರೀತಿ ಹೊಸ ಘೋಷಣೆ ಹೊರಡಿಸಿದ್ದಾರೆ.
ಗೋವು ಆಶ್ರಯ ತಾಣವನ್ನು ನಿರ್ಮಿಸುವ ಮೂಲಕ ಕಾಂಗ್ರೆಸ್, ಪ್ರಾಣಿಗಳ ಮೇವಿನ ಸ್ಥಳವನ್ನು ಅತಿಕ್ರಮಣ ಮಾಡಲು ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಭಾನುವಾರ ಭೋಪಾಲ್‍ನ ಈಶಾನ್ಯ ಭಾಗದಲ್ಲಿರುವ ಖುಜುರಾವೋದಲ್ಲಿ ಜನ ಆಶೀರ್ವಾದ್ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಚೌಹಾಣ್, ನಮ್ಮಲ್ಲಿ ಗೋವು ಸಂವರ್ಧನ್ ಮಂಡಳಿ ಇದೆ. ಆದರೆ ಗೋವು ಸಚಿವಾಲಯವೊಂದಿದ್ದರೆ ಉತ್ತಮ ಎಂದು ನನ್ನ ಅನಿಸಿಕೆ. ಮಂಡಳಿಗೆ ಆರ್ಥಿಕ ನಿರ್ಬಂಧಗಳಿವೆ, ಆದರೆ ಸಚಿವಾಲಯದಲ್ಲಿ ಈ ರೀತಿ ಇರಲ್ಲ.ಗೋಶಾಲೆಗಳು ಉತ್ತಮ ಯೋಚನೆಯೇ ಆಗಿದ್ದರೂ, ಹಸುಗಳನ್ನು ಮನೆಯಲ್ಲಿ ಸಾಕಿದರೆ ಒಳ್ಳೆಯದು ಎಂದುಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT