ಎಐಎಡಿಎಂಕೆ ವಿರುದ್ಧ ಚುನಾವಣಾ ಅಖಾಡದಲ್ಲಿ ಸ್ಪರ್ಧಿಸಲು ಡಿಎಂಕೆ ಕಾರ್ಯತಂತ್ರ ರೂಪಿಸಲಿದ್ದು, ಪ್ರಶಾಂತ್ ಕಿಶೋರ್ ಅವರ ಭಾರತೀಯ ರಾಜಕೀಯ ಕ್ರಿಯಾಸಮಿತಿ ಇದಕ್ಕೆ ಸಹಾಯ ಮಾಡಲಿದೆ.
2021ರ ಚುನಾವಣೆಯಲ್ಲಿ ಸ್ಪರ್ಧಿಸಿ ತಮಿಳುನಾಡಿನ ಗತವೈಭವವನ್ನು ಮರಳಿ ತರುವ ನಮ್ಮ ಯೋಜನೆ ಸಫಲಗೊಳಿಸಲು ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐ-ಪಿಎಸಿ) ನಮ್ಮೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದು ಸ್ಟಾಲಿನ್ ಭಾನುವಾರ ಟ್ವೀಟಿಸಿದ್ದಾರೆ.