ಚೆನ್ನೈ: ಪೊಯಸ್ ಗಾರ್ಡನ್ನಲ್ಲಿರುವ ಜಯಲಲಿತಾ ಅವರ ಭವ್ಯ ಬಂಗಲೆ, ವೇದ ನಿಲಯಮ್ ಅನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯಪಾಲ ಬನ್ವರಿ ಲಾಲ್ ಪುರೋಹಿತ್ ಅವರು ಶುಕ್ರವಾರ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.
ಜಯಲಲಿತಾ ಅವರ ನಿವಾಸವನ್ನುಸ್ಮಾರಕವಾಗಿಸಲು ತಾತ್ಕಾಲಿಕವಾಗಿಸ್ವಾಧೀನಕ್ಕೆ ಪಡೆಯಲಾಗಿದೆ.
ಚೆನ್ನೈನ ಪೊಯಸ್ ಗಾರ್ಡನ್ಲ್ಲಿರುವ ಜಯಲಲಿತಾ ಅವರ ‘ವೇದ ನಿಲಯಂ’
ಜಯಲಿತಾ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಅದರ ಮೂಲಕ ಸ್ಮಾರಕ ನಿರ್ಮಿಸುವ ರಾಜ್ಯ ಸರ್ಕಾರದ ಯೋಜನೆಗೂ ಈ ಸುಗ್ರೀವಾಜ್ಞೆಯಿಂದ ಬಲಬಂದಂತಾಗಿದೆ.
ಜಯಲಲಿತಾ ಅವರು ವಾಸಿಸುತ್ತಿದ್ದ ಮನೆ ‘ವೇದ ನಿಲಯಂ’ ಅನ್ನು ಸ್ಮಾರಕ ಎಂದು ಘೋಷಿಸಿ, 2019ರ ಜೂನ್ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.