ಲೋಕಸಭೆಯ ಮಾಜಿ ಸ್ಪೀಕರ್ ಜಿ. ಮೋಹನಚಂದ್ರ ಬಾಲಯೋಗಿ ಅವರ ಪುತ್ರ ಹರೀಶ್ ಅವರು ಎಸ್ಸಿ ಮೀಸಲು ಕ್ಷೇತ್ರ ಅಮಲಾಪುರಂನಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವರು. ಅನಂತಪುರಂನ ಹಾಲಿ ಸಂಸದ ಜೆ.ಸಿ. ದಿವಾಕರ ರೆಡ್ಡಿ ಹಾಗೂ ರಾಜಮಹೇಂದ್ರವರಂನ ಸಂಸದ ಮಾಗಂಟಿ ಮುರಳಿ ಮೋಹನ್ ಅವರು ಈ ಬಾರಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಹಾಗಾಗಿ, ದಿವಾಕರ್ ಅವರ ಪುತ್ರ ಪವನ್ ರೆಡ್ಡಿ ಹಾಗೂ ಮುರಳಿ ಮೋಹನ್ರ ಸೊಸೆ ಮಾಗಂಟಿ ರೂಪಾ ಅವರಿಗೆ ಆಯಾ ಕ್ಷೇತ್ರಗಳಿಂದ ಟಿಕೆಟ್ ನೀಡಲಾಗಿದೆ.