<p>‘ಗುರೂಜಿ, ಸುಖ, ಶಾಂತಿ, ನೆಮ್ಮದಿ ಇಲ್ಲ...’ ಸುಮಿ ಸಂಕಟ ಹೇಳಿಕೊಂಡಳು.</p>.<p>‘ಯಾಕಮ್ಮಾ, ಗಂಡ–ಹೆಂಡ್ತಿ ನಡುವೆ ಹೊಂದಾಣಿಕೆ ಇಲ್ವೇ?’ ಗುರೂಜಿ ಕೇಳಿದರು.</p>.<p>‘ಹೊಂದಾಣಿಕೆಯ ಸಮಸ್ಯೆ ನಮ್ಮದಲ್ಲ ಗುರೂಜಿ, ನಮ್ಮನ್ನಾಳುವ ಆಡಳಿತ ಪಕ್ಷ, ವಿಪಕ್ಷದವರ ನಡುವೆ ಹೊಂದಾಣಿಕೆ, ವಿಶ್ವಾಸವಿಲ್ಲ. ದಿನಬೆಳಗಾದರೆ ಬೈದಾಟ, ಕಿತ್ತಾಟ, ಜಗಳ, ರಗಳೆ ಮಾಡಿಕೊಂಡು ನೆಮ್ಮದಿ ಕೆಡಿಸಿಕೊಂಡಿದ್ದಾರೆ. ಪ್ರಭುಗಳು ಕ್ಷೇಮವಾಗಿದ್ದರಲ್ಲವೆ ಪ್ರಜೆಗಳು ಸೌಖ್ಯದಿಂದಿರಲು ಸಾಧ್ಯ?’ ಅಂದ ಶಂಕ್ರಿ.</p>.<p>‘ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ಆಳುವ, ಕೇಳುವ ಪಕ್ಷಗಳ ಜಗಳದಲ್ಲಿ ಪ್ರಜೆಗಳು ಫಜೀತಿ ಪಡುತ್ತಿದ್ದಾರೆ’.</p>.<p>‘ಧರ್ಮಸ್ಥಳದ ಕೇಸು, ದಸರಾ ವಿವಾದ, ಗಣೇಶೋತ್ಸವ ಗಲಾಟೆ ಮುಂದಿಟ್ಟುಕೊಂಡು ರಗಳೆ ಮಾಡ್ತಿದ್ದಾರೆ. ಇವು ಮುಗಿದ ಮೇಲೆ ಇನ್ನೊಂದು ಇಶ್ಯೂ ಹಿಡಿದು ಜಗಳಕ್ಕಿಳಿಯುತ್ತಾರೆ. ಪ್ರಜೆಗಳ ಕಷ್ಟ ಕೇಳೋದನ್ನೇ ಮರೆತಿದ್ದಾರೆ’.</p>.<p>‘ತೆರಿಗೆ, ದಂಡ ಹಾಕೋದನ್ನು ಮಾತ್ರ ಮರೆತಿಲ್ಲ. ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದರೆ ನಮಗೆ ದಂಡ ಹಾಕುವಂತೆ, ರಸ್ತೆ ಗುಂಡಿ ಮುಚ್ಚದ ಸರ್ಕಾರಕ್ಕೂ ದಂಡ ಹಾಕಬೇಕಲ್ವೆ ಗುರೂಜಿ?’</p>.<p>‘ದೊರೆ ಮಾಡುವುದಕ್ಕೆ ದಂಡ ಇಲ್ಲ’ ನಕ್ಕರು ಗುರೂಜಿ.</p>.<p>‘ಸಾಮಾನ್ಯ ಪ್ರಜೆಗಳು ಜೀವನ ನಡೆಸೋದು ಕಷ್ಟವಾಗಿದೆ. ಬೆಲೆ ಏರಿಕೆ ಬರೆ, ತೆರಿಗೆ ಹೊರೆ ನಿಭಾಯಿಸಲಾಗದೆ ಪ್ರಜೆಗಳು ಕಣ್ಣು–ಬಾಯಿ ಬಿಡುತ್ತಿದ್ದಾರೆ’.</p>.<p>‘ಪ್ರಜೆಗಳ ಕಷ್ಟ ಪರಿಹಾರದ ಕಡೆ ಪ್ರಭುಗಳು ಗಮನ ಹರಿಸಬೇಕು. ಆಡಳಿತ, ವಿಪಕ್ಷದವರು ಶಾಂತಿ, ಸಹನೆ, ಸಹಿಷ್ಣುತೆಯಿಂದ ಬಾಳಲು ನಾವು ಯಾವುದಾದರೂ ಪೂಜೆ, ಹೋಮ ಮಾಡಿಸಬೇಕಾ?’</p>.<p>‘ಆಡಳಿತ, ವಿಪಕ್ಷಗಳು ಅತ್ತೆ–ಸೊಸೆ ಇದ್ದಂತೆ. ಅವು ಜಗಳ ಆಡಿಕೊಂಡೇ ಇರಬೇಕು... ಅವರು ಹೊಂದಾಣಿಕೆ ಮಾಡಿಕೊಂಡರೆ ಪ್ರಜೆಗಳಿಗೆ ಪ್ರಾಬ್ಲಂ ಜಾಸ್ತಿ!’</p>.<p>‘ಹಾಗಾದ್ರೆ ನಾವು ಏನು ಮಾಡಬೇಕು?’</p>.<p>‘ಸರ್ಕಾರ ನಂಬಿಕೊಳ್ಳದೆ ಸಂಸಾರ ನಡೆಸುವ ಜಾಣತನ ಕಲಿಯಬೇಕು...’ ಗುರೂಜಿ ಇನ್ನೊಮ್ಮೆ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಗುರೂಜಿ, ಸುಖ, ಶಾಂತಿ, ನೆಮ್ಮದಿ ಇಲ್ಲ...’ ಸುಮಿ ಸಂಕಟ ಹೇಳಿಕೊಂಡಳು.</p>.<p>‘ಯಾಕಮ್ಮಾ, ಗಂಡ–ಹೆಂಡ್ತಿ ನಡುವೆ ಹೊಂದಾಣಿಕೆ ಇಲ್ವೇ?’ ಗುರೂಜಿ ಕೇಳಿದರು.</p>.<p>‘ಹೊಂದಾಣಿಕೆಯ ಸಮಸ್ಯೆ ನಮ್ಮದಲ್ಲ ಗುರೂಜಿ, ನಮ್ಮನ್ನಾಳುವ ಆಡಳಿತ ಪಕ್ಷ, ವಿಪಕ್ಷದವರ ನಡುವೆ ಹೊಂದಾಣಿಕೆ, ವಿಶ್ವಾಸವಿಲ್ಲ. ದಿನಬೆಳಗಾದರೆ ಬೈದಾಟ, ಕಿತ್ತಾಟ, ಜಗಳ, ರಗಳೆ ಮಾಡಿಕೊಂಡು ನೆಮ್ಮದಿ ಕೆಡಿಸಿಕೊಂಡಿದ್ದಾರೆ. ಪ್ರಭುಗಳು ಕ್ಷೇಮವಾಗಿದ್ದರಲ್ಲವೆ ಪ್ರಜೆಗಳು ಸೌಖ್ಯದಿಂದಿರಲು ಸಾಧ್ಯ?’ ಅಂದ ಶಂಕ್ರಿ.</p>.<p>‘ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ಆಳುವ, ಕೇಳುವ ಪಕ್ಷಗಳ ಜಗಳದಲ್ಲಿ ಪ್ರಜೆಗಳು ಫಜೀತಿ ಪಡುತ್ತಿದ್ದಾರೆ’.</p>.<p>‘ಧರ್ಮಸ್ಥಳದ ಕೇಸು, ದಸರಾ ವಿವಾದ, ಗಣೇಶೋತ್ಸವ ಗಲಾಟೆ ಮುಂದಿಟ್ಟುಕೊಂಡು ರಗಳೆ ಮಾಡ್ತಿದ್ದಾರೆ. ಇವು ಮುಗಿದ ಮೇಲೆ ಇನ್ನೊಂದು ಇಶ್ಯೂ ಹಿಡಿದು ಜಗಳಕ್ಕಿಳಿಯುತ್ತಾರೆ. ಪ್ರಜೆಗಳ ಕಷ್ಟ ಕೇಳೋದನ್ನೇ ಮರೆತಿದ್ದಾರೆ’.</p>.<p>‘ತೆರಿಗೆ, ದಂಡ ಹಾಕೋದನ್ನು ಮಾತ್ರ ಮರೆತಿಲ್ಲ. ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದರೆ ನಮಗೆ ದಂಡ ಹಾಕುವಂತೆ, ರಸ್ತೆ ಗುಂಡಿ ಮುಚ್ಚದ ಸರ್ಕಾರಕ್ಕೂ ದಂಡ ಹಾಕಬೇಕಲ್ವೆ ಗುರೂಜಿ?’</p>.<p>‘ದೊರೆ ಮಾಡುವುದಕ್ಕೆ ದಂಡ ಇಲ್ಲ’ ನಕ್ಕರು ಗುರೂಜಿ.</p>.<p>‘ಸಾಮಾನ್ಯ ಪ್ರಜೆಗಳು ಜೀವನ ನಡೆಸೋದು ಕಷ್ಟವಾಗಿದೆ. ಬೆಲೆ ಏರಿಕೆ ಬರೆ, ತೆರಿಗೆ ಹೊರೆ ನಿಭಾಯಿಸಲಾಗದೆ ಪ್ರಜೆಗಳು ಕಣ್ಣು–ಬಾಯಿ ಬಿಡುತ್ತಿದ್ದಾರೆ’.</p>.<p>‘ಪ್ರಜೆಗಳ ಕಷ್ಟ ಪರಿಹಾರದ ಕಡೆ ಪ್ರಭುಗಳು ಗಮನ ಹರಿಸಬೇಕು. ಆಡಳಿತ, ವಿಪಕ್ಷದವರು ಶಾಂತಿ, ಸಹನೆ, ಸಹಿಷ್ಣುತೆಯಿಂದ ಬಾಳಲು ನಾವು ಯಾವುದಾದರೂ ಪೂಜೆ, ಹೋಮ ಮಾಡಿಸಬೇಕಾ?’</p>.<p>‘ಆಡಳಿತ, ವಿಪಕ್ಷಗಳು ಅತ್ತೆ–ಸೊಸೆ ಇದ್ದಂತೆ. ಅವು ಜಗಳ ಆಡಿಕೊಂಡೇ ಇರಬೇಕು... ಅವರು ಹೊಂದಾಣಿಕೆ ಮಾಡಿಕೊಂಡರೆ ಪ್ರಜೆಗಳಿಗೆ ಪ್ರಾಬ್ಲಂ ಜಾಸ್ತಿ!’</p>.<p>‘ಹಾಗಾದ್ರೆ ನಾವು ಏನು ಮಾಡಬೇಕು?’</p>.<p>‘ಸರ್ಕಾರ ನಂಬಿಕೊಳ್ಳದೆ ಸಂಸಾರ ನಡೆಸುವ ಜಾಣತನ ಕಲಿಯಬೇಕು...’ ಗುರೂಜಿ ಇನ್ನೊಮ್ಮೆ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>