ತೇಜ್ ಯಾದವ್ ಹೇಳಿದ್ದೇನು?
ಈ ಘಟನೆ ಬಗ್ಗೆ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತೇಜ್, ನನ್ನ ಬೌನ್ಸರ್ಗಳು ಯಾರ ಮೇಲೂ ಹಲ್ಲೆ ನಡೆಸಿಲ್ಲ.ನಾನುಮತಗಟ್ಟೆಗೆ ಹೋದಾಗ ಕೆಲವೊಂದು ಮಾಧ್ಯಮದವರು ನನ್ನ ವಾಹನವನ್ನು ಸುತ್ತುವರಿದಿದ್ದಾರೆ.ಅದರಲ್ಲಿ ಒಬ್ಬ ಛಾಯಾಗ್ರಾಹಕ ನನ್ನ ಕಾರಿನ ವಿಂಡ್ಸ್ಕ್ರೀನ್ ಒಡೆದು ಹಾಕಿದ್ದಾನೆ.
ಈ ಪ್ರಕರಣದ ಬಗ್ಗೆ ನಾನು ಎಫ್ಐಆರ್ ದಾಖಲಿಸಿದ್ದೇನೆ. ಈ ಹಿಂದೆಯೂ ನನಗೆ ಬೆದರಿಕೆಗಳು ಬಂದಿತ್ತು. ನನ್ನ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ನನ್ನನ್ನು ಹತ್ಯೆ ಮಾಡಲು ಇದೊಂದು ಸಂಚು ಆಗಿದ್ದು, ಪೂರ್ವಯೋಜಿತ ಕೃತ್ಯ ಎಂದಿದ್ದಾರೆ.