<p><strong>ಮುಜಫ್ಫರ್ನಗರ (ಉತ್ತರ ಪ್ರದೇಶ):</strong> ಸರ್ಕಾರಿ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕ ಬೇರೆ ಬೇರೆ ಜಿಲ್ಲೆಯ ಎರಡು ಶಾಲೆಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದ ಪ್ರಕರಣ ಈಗ ಬೆಳಕಿಗೆ ಬಂದಿದೆ.</p>.<p>ಪ್ರದೀಪ್ ಕುಮಾರ್ ಎಂಬುವವರು ಒಂದೇ ದಾಖಲೆಗಳನ್ನು ನೀಡಿ ಮುಜಫ್ಫರ್ನಗರ ಮತ್ತು ಬರೇಲಿ ಜಿಲ್ಲೆಗಳ ಸರ್ಕಾರಿ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು.</p>.<p>‘ಪ್ರದೀಪ್ ಕುಮಾರ್ 2011 ಜೂನ್ನಿಂದಲೂ ಮುಜಫ್ಫರ್ನಗರದಲ್ಲಿ ಮನೆ ಮಾಡಿಕೊಂಡು, ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಬರೇಲಿಯಲ್ಲಿರುವ ಶಾಲೆಗೆ ಆತ ಹೋಗುತ್ತಲೇ ಇರಲಿಲ್ಲ. ಆದರೆ ಆ ಶಾಲೆಯಿಂದ ಸಂಬಳ ಪಡೆದುಕೊಳ್ಳುತ್ತಿದ್ದ ವಿಷಯ ದಾಖಲೆಗಳ ಪರಿಶೀಲನೆ ವೇಳೆ ಗೊತ್ತಾಗಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ’ ಎಂದು ಶಿಕ್ಷಣ ಅಧಿಕಾರಿ ನರೇಂದ್ರ ಸಿಂಗ್ ಮಾಹಿತಿ ನೀಡಿದರು.</p>.<p>‘ಎಂಟು ವರ್ಷಗಳ ಕಾಲ ಮುಜಫ್ಫರ್ನಗರ ಶಾಲೆಯಲ್ಲಿ ಪಾಠ ಮಾಡಿ, 2019 ನವೆಂಬರ್ನಲ್ಲಿ ವೈದ್ಯಕೀಯ ಕಾರಣ ನೀಡಿ ರಜೆ ತೆಗೆದುಕೊಂಡಿದ್ದ ಪ್ರದೀಪ್ ಕುಮಾರ್, ನಂತರ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಈಗ ಆತ ಎಲ್ಲಿದ್ದಾನೆ ಎನ್ನುವ ಕುರಿತು ಮಾಹಿತಿ ಇಲ್ಲ’ ಎಂದೂ ತಿಳಿಸಿದರು.</p>.<p>ಒಂದೇ ದಾಖಲೆ ನೀಡಿ, ವಿವಿಧ ಸರ್ಕಾರಿ ಶಾಲೆಗಳಲ್ಲಿ ಕೆಲಸ ಪಡೆದುಕೊಳ್ಳುತ್ತಿದ್ದ ಹಲವರನ್ನು ಕಳೆದ ತಿಂಗಳ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಜಫ್ಫರ್ನಗರ (ಉತ್ತರ ಪ್ರದೇಶ):</strong> ಸರ್ಕಾರಿ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕ ಬೇರೆ ಬೇರೆ ಜಿಲ್ಲೆಯ ಎರಡು ಶಾಲೆಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದ ಪ್ರಕರಣ ಈಗ ಬೆಳಕಿಗೆ ಬಂದಿದೆ.</p>.<p>ಪ್ರದೀಪ್ ಕುಮಾರ್ ಎಂಬುವವರು ಒಂದೇ ದಾಖಲೆಗಳನ್ನು ನೀಡಿ ಮುಜಫ್ಫರ್ನಗರ ಮತ್ತು ಬರೇಲಿ ಜಿಲ್ಲೆಗಳ ಸರ್ಕಾರಿ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು.</p>.<p>‘ಪ್ರದೀಪ್ ಕುಮಾರ್ 2011 ಜೂನ್ನಿಂದಲೂ ಮುಜಫ್ಫರ್ನಗರದಲ್ಲಿ ಮನೆ ಮಾಡಿಕೊಂಡು, ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಬರೇಲಿಯಲ್ಲಿರುವ ಶಾಲೆಗೆ ಆತ ಹೋಗುತ್ತಲೇ ಇರಲಿಲ್ಲ. ಆದರೆ ಆ ಶಾಲೆಯಿಂದ ಸಂಬಳ ಪಡೆದುಕೊಳ್ಳುತ್ತಿದ್ದ ವಿಷಯ ದಾಖಲೆಗಳ ಪರಿಶೀಲನೆ ವೇಳೆ ಗೊತ್ತಾಗಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ’ ಎಂದು ಶಿಕ್ಷಣ ಅಧಿಕಾರಿ ನರೇಂದ್ರ ಸಿಂಗ್ ಮಾಹಿತಿ ನೀಡಿದರು.</p>.<p>‘ಎಂಟು ವರ್ಷಗಳ ಕಾಲ ಮುಜಫ್ಫರ್ನಗರ ಶಾಲೆಯಲ್ಲಿ ಪಾಠ ಮಾಡಿ, 2019 ನವೆಂಬರ್ನಲ್ಲಿ ವೈದ್ಯಕೀಯ ಕಾರಣ ನೀಡಿ ರಜೆ ತೆಗೆದುಕೊಂಡಿದ್ದ ಪ್ರದೀಪ್ ಕುಮಾರ್, ನಂತರ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಈಗ ಆತ ಎಲ್ಲಿದ್ದಾನೆ ಎನ್ನುವ ಕುರಿತು ಮಾಹಿತಿ ಇಲ್ಲ’ ಎಂದೂ ತಿಳಿಸಿದರು.</p>.<p>ಒಂದೇ ದಾಖಲೆ ನೀಡಿ, ವಿವಿಧ ಸರ್ಕಾರಿ ಶಾಲೆಗಳಲ್ಲಿ ಕೆಲಸ ಪಡೆದುಕೊಳ್ಳುತ್ತಿದ್ದ ಹಲವರನ್ನು ಕಳೆದ ತಿಂಗಳ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>