<p><strong>ಲಖನೌ:</strong>’ಪತಿ ‘ಚಿತ್ರಹಿಸೆ‘ ಮತ್ತು ’ಕಿರುಕುಳ‘ ನೀಡುತ್ತಿದ್ದಾರೆ‘ ಎಂದು ಉತ್ತರ ಪ್ರದೇಶದ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ತನ್ನ ಪತಿ ಬಾಬುರಾಮ್ ನಿಷಾದ್ ವಿರುದ್ಧ ಪತ್ನಿ ಆರೋಪ ಮಾಡಿದ್ದು, ಈಗ ಆ ಸಚಿವ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.</p>.<p>ಬಾಬುರಾಮ್ ನಿಷಾದ್ ಅವರು ಉತ್ತರ ಪ್ರದೇಶದ ಹಿಂದುಳಿದ ವರ್ಗದ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು, ರಾಜ್ಯ ಸಚಿವ ಸ್ಥಾನಮಾನ ಹೊಂದಿದ್ದಾರೆ. ಅವರು, ಹಮೀದ್ಪುರ ಜಿಲ್ಲೆಯ ನ್ಯಾಯಾಲಯಕ್ಕೆ ಬುಧವಾರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.</p>.<p>ನನ್ನ ಪತಿಯಿಂದಲೇ ನನಗೆ ಜೀವ ಬೆದರಿಕೆ ಇದೆ, ನನ್ನನ್ನು ರಕ್ಷಿಸಿ ಎಂದು ಸಚಿವರ ಪತ್ನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.</p>.<p>ನನ್ನ ಪತಿ ನನ್ನನ್ನು ಹೊಡೆದಿದ್ದಾರೆ ಮತ್ತು ಕೊಲ್ಲುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ. ಜತೆಗೆ, ಗುಂಡು ಹಾರಿಸುವುದಾಗಿಯೂ ಹೇಳಿದ್ದಾರೆ. ಮದುವೆಯಾಗಿ 14 ವರ್ಷ ಕಳೆದಿವೆ. ಮದುವೆ ಆದ ದಿನದಿಂದಲೂ ’ಚಿತ್ರಹಿಂಸೆ‘ ನೀಡುತ್ತಲೇ ಬಂದಿದ್ದಾರೆ ಎಂದು ಪತ್ನಿಯು ಪತಿಯ ವಿರುದ್ಧ ದೂರಿದ್ದಾರೆ.</p>.<p>‘ಅವನು(ನಿಷಾದ್) ಗನ್ ಪಾಯಿಂಟ್ನಲ್ಲಿ ನನ್ನನ್ನು ಬೆದರಿಸುತ್ತಿದ್ದನು... ನನ್ನ ಮೇಲೆ ಮೂತ್ರ ವಿಸರ್ಜಿಸಿ ಕೆಟ್ಟದಾಗಿ ಥಳಿಸುತ್ತಿದ್ದ.... ಅವನು ನನ್ನ ಹೆತ್ತವರು ಮತ್ತು ಸಹೋದರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ...‘ ಎಂದು ತಾವು ಬರೆದ ಪತ್ರದಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.</p>.<p>ಕೆಲ ತಿಂಗಳ ಹಿಂದೆ ನಾನು ರಾಜ್ಯ ರಾಜಧಾನಿಯ ಕೈಸರ್ಬಾಗ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿರುವ ಪತ್ನಿ, ಪೊಲೀಸರು ಸಚಿವರೊಟ್ಟಿಗೆ ಉತ್ತಮ ಒಡನಾಟ ಹೊಂದಿದ್ದು, ನಿಷಾದ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ನನ್ನ ದೂರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.</p>.<p>ಪತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದು, ತನ್ನ ಪರಿಸ್ಥಿತಿಯ ಕುರಿತು ಫೇಸ್ಬುಕ್ನಲ್ಲಿ ಸರಣಿ ಪೋಸ್ಟ್ಗಳನ್ನು ಬರೆದುಕೊಂಡಿದ್ದಾರೆ.</p>.<p>ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ನನ್ನ ಮೇಲೆ ಮಾಡಿರುವ ಆರೋಪಗಳಿಗೆ ನಾನು ನ್ಯಾಯಾಲಯದಲ್ಲೇ ಉತ್ತರ ನೀಡುವೆ ಎಂದು ಆ ಮಹಿಳೆ ಹೇಳಿದ್ದಾರೆ.</p>.<p>ಪತ್ನಿ ಮಾಡಿರುವ ಆರೋಪಗಳನ್ನು ತಳ್ಳಿಹಾಕಿರುವ ಸಚಿವ ನಿಷಾದ್, ’ಪತ್ನಿ ತಮ್ಮೊಂದಿಗೆ ಯಾವಾಗಲು ಜಗಳವಾಡುತ್ತಿದ್ದರು ಮತ್ತು ಅವರು(ಪತ್ನಿ) ಯಾವಾಗಲೂ ಹಣವನ್ನು ಬಯಸುತ್ತಾರೆ.... ಮತ್ತು ಅವರು ಬಹಳಷ್ಟು ಖರ್ಚು ಮಾಡುತ್ತಾರೆ‘ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong>’ಪತಿ ‘ಚಿತ್ರಹಿಸೆ‘ ಮತ್ತು ’ಕಿರುಕುಳ‘ ನೀಡುತ್ತಿದ್ದಾರೆ‘ ಎಂದು ಉತ್ತರ ಪ್ರದೇಶದ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ತನ್ನ ಪತಿ ಬಾಬುರಾಮ್ ನಿಷಾದ್ ವಿರುದ್ಧ ಪತ್ನಿ ಆರೋಪ ಮಾಡಿದ್ದು, ಈಗ ಆ ಸಚಿವ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.</p>.<p>ಬಾಬುರಾಮ್ ನಿಷಾದ್ ಅವರು ಉತ್ತರ ಪ್ರದೇಶದ ಹಿಂದುಳಿದ ವರ್ಗದ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು, ರಾಜ್ಯ ಸಚಿವ ಸ್ಥಾನಮಾನ ಹೊಂದಿದ್ದಾರೆ. ಅವರು, ಹಮೀದ್ಪುರ ಜಿಲ್ಲೆಯ ನ್ಯಾಯಾಲಯಕ್ಕೆ ಬುಧವಾರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.</p>.<p>ನನ್ನ ಪತಿಯಿಂದಲೇ ನನಗೆ ಜೀವ ಬೆದರಿಕೆ ಇದೆ, ನನ್ನನ್ನು ರಕ್ಷಿಸಿ ಎಂದು ಸಚಿವರ ಪತ್ನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.</p>.<p>ನನ್ನ ಪತಿ ನನ್ನನ್ನು ಹೊಡೆದಿದ್ದಾರೆ ಮತ್ತು ಕೊಲ್ಲುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ. ಜತೆಗೆ, ಗುಂಡು ಹಾರಿಸುವುದಾಗಿಯೂ ಹೇಳಿದ್ದಾರೆ. ಮದುವೆಯಾಗಿ 14 ವರ್ಷ ಕಳೆದಿವೆ. ಮದುವೆ ಆದ ದಿನದಿಂದಲೂ ’ಚಿತ್ರಹಿಂಸೆ‘ ನೀಡುತ್ತಲೇ ಬಂದಿದ್ದಾರೆ ಎಂದು ಪತ್ನಿಯು ಪತಿಯ ವಿರುದ್ಧ ದೂರಿದ್ದಾರೆ.</p>.<p>‘ಅವನು(ನಿಷಾದ್) ಗನ್ ಪಾಯಿಂಟ್ನಲ್ಲಿ ನನ್ನನ್ನು ಬೆದರಿಸುತ್ತಿದ್ದನು... ನನ್ನ ಮೇಲೆ ಮೂತ್ರ ವಿಸರ್ಜಿಸಿ ಕೆಟ್ಟದಾಗಿ ಥಳಿಸುತ್ತಿದ್ದ.... ಅವನು ನನ್ನ ಹೆತ್ತವರು ಮತ್ತು ಸಹೋದರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ...‘ ಎಂದು ತಾವು ಬರೆದ ಪತ್ರದಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.</p>.<p>ಕೆಲ ತಿಂಗಳ ಹಿಂದೆ ನಾನು ರಾಜ್ಯ ರಾಜಧಾನಿಯ ಕೈಸರ್ಬಾಗ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿರುವ ಪತ್ನಿ, ಪೊಲೀಸರು ಸಚಿವರೊಟ್ಟಿಗೆ ಉತ್ತಮ ಒಡನಾಟ ಹೊಂದಿದ್ದು, ನಿಷಾದ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ನನ್ನ ದೂರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.</p>.<p>ಪತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದು, ತನ್ನ ಪರಿಸ್ಥಿತಿಯ ಕುರಿತು ಫೇಸ್ಬುಕ್ನಲ್ಲಿ ಸರಣಿ ಪೋಸ್ಟ್ಗಳನ್ನು ಬರೆದುಕೊಂಡಿದ್ದಾರೆ.</p>.<p>ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ನನ್ನ ಮೇಲೆ ಮಾಡಿರುವ ಆರೋಪಗಳಿಗೆ ನಾನು ನ್ಯಾಯಾಲಯದಲ್ಲೇ ಉತ್ತರ ನೀಡುವೆ ಎಂದು ಆ ಮಹಿಳೆ ಹೇಳಿದ್ದಾರೆ.</p>.<p>ಪತ್ನಿ ಮಾಡಿರುವ ಆರೋಪಗಳನ್ನು ತಳ್ಳಿಹಾಕಿರುವ ಸಚಿವ ನಿಷಾದ್, ’ಪತ್ನಿ ತಮ್ಮೊಂದಿಗೆ ಯಾವಾಗಲು ಜಗಳವಾಡುತ್ತಿದ್ದರು ಮತ್ತು ಅವರು(ಪತ್ನಿ) ಯಾವಾಗಲೂ ಹಣವನ್ನು ಬಯಸುತ್ತಾರೆ.... ಮತ್ತು ಅವರು ಬಹಳಷ್ಟು ಖರ್ಚು ಮಾಡುತ್ತಾರೆ‘ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>