'ಇದು ವಿಶ್ವದಲ್ಲಿಯೇ ಪ್ರಥಮ ಸಂಶೋಧನೆಯಾಗಿದೆ. ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಿದರೆ, ಅದು ಆಮ್ಲಜನಕವಾಗಿ ಪರಿವರ್ತನೆಯಾಗುತ್ತದೆ. ಇದು ಎಂಜಿನ್ ಚಾಲನೆಗೆ ಸಹಾಯ ಮಾಡುತ್ತದೆ.ನಾನು 10ವರ್ಷಗಳಿಂದ ಈ ಸಂಶೋಧನೆಯಲ್ಲಿ ತೊಡಗಿ ಯಶಸ್ಸು ಸಾಧಿಸಿದ್ದೇನೆ. ನೀರಿನಿಂದ ಎಂಜಿನ್ ಚಲನೆ ಮಾಡಬಹುದಾಗಿ ನಮ್ಮ ರಾಜ್ಯದಲ್ಲಿ ಹಾಗೂ ಭಾರತದ ಹಲವು ಕಡೆ ಎಲ್ಲಾ ವ್ಯಕ್ತಿಗಳನ್ನು ಭೇಟಿ ಮಾಡಿ ಹೇಳಿದೆ. ಆದರೆ, ಅವರಿಂದ ಯಾವುದೇ ರೀತಿಯ ಪೂರಕ ಪ್ರತಿಕ್ರಿಯೆ ಬರಲಿಲ್ಲ. ಆಗ ನಾನು ಜಪಾನ್ ಸರ್ಕಾರದ ಬಳಿ ನನ್ನ ಸಂಶೋಧನೆಯ ವಿವರಗಳನ್ನು ತಿಳಿಸಿದೆ. ನನ್ನ ಮನವಿ ಪರಿಶೀಲಿಸಿದ ಜಪಾನ್ ಸರ್ಕಾರ ಒಪ್ಪಿಕೊಂಡಿದೆ. ಮುಂದಿನ ದಿನಗಳಲ್ಲಿ ಜಪಾನ್ನಲ್ಲಿ ಸಂಸ್ಕರಿಸಿದ ನೀರಿನಿಂದ ವಾಹನ ಚಲಾಯಿಸುವ ಎಂಜಿನ್ಗಳನ್ನು ಕಾಣಬಹುದು'ಎಂದು ಕುಮಾರಸ್ವಾಮಿ ಹೇಳುತ್ತಾರೆ.