ಆದರೆ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತ ಪಡಿಸಿದ್ದರಿಂದ ಮನಿತಿ ಸಂಘಟನೆಯ ಮಹಿಳೆಯರಿಗೆ ಸನ್ನಿಧಾನದತ್ತ ಹೋಗಲು ಸಾಧ್ಯವಾಗಿಲ್ಲ.ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನೂಕು ನುಗ್ಗಲು ಉಂಟಾಗಿದ್ದು, ಮನಿತಿ ಸಂಘಟನೆಯ ಮಹಿಳೆಯರನ್ನು ಕಂಟ್ರೋಲ್ ರೂಂಗೆ ಕರೆದೊಯ್ದು ರಕ್ಷಣೆ ನೀಡಲಾಗಿತ್ತು.ಆನಂತರ ಅವರನ್ನು ನಿಲಯ್ಕಲ್ಗೆ ಕರೆದೊಯ್ದು, ಅಲ್ಲಿಂದ ಸುರಕ್ಷಿತವಾಗಿ ಕೇರಳದ ಗಡಿ ದಾಟಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.