<p><strong>ಬೆಂಗಳೂರು: </strong>‘ಯಾವುದೇ ಜಾತಿ–ಧರ್ಮಕ್ಕೆ ಅಂಟಿಕೊಂಡವರು ಶರಣ–ಶರಣೆಯರಲ್ಲ. ಜಾತಿ ರಹಿತವಾಗಿ, ವರ್ಗರಹಿತವಾಗಿ ಸಮ ಸಮಾಜ ನಿರ್ಮಾಣದ ಧ್ಯೇಯ ಹೊಂದಿದವರು ಮಾತ್ರ ನಿಜವಾದ ಶರಣರು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.</p>.<p>ನಗರದಲ್ಲಿ ಶನಿವಾರ ಹಲವು ಸಾಧಕರಿಗೆ ‘ಅಲ್ಲಮ ಶೂನ್ಯ ಸಿರಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ‘ಹಿಂದೂಧರ್ಮ ಎನ್ನುವುದು ಶ್ರೇಣೀಕೃತವಾದುದು. ಈ ವ್ಯವಸ್ಥೆಯನ್ನು ಬದಲಾಯಿಸಲು ವಚನಗಳ ಮೂಲಕ ಜಾಗೃತಿ ಮೂಡಿಸಿದ ಅಲ್ಲಮಪ್ರಭು ಸಮ ಸಮಾಜದ ಮೊದಲ ಪ್ರತಿಪಾದಕರು’ ಎಂದರು.</p>.<p>‘ಶ್ರೇಣೀಕೃತ ವ್ಯವಸ್ಥೆಯಲ್ಲಿ ಬಹುಸಂಖ್ಯಾತರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಇದೇ ಅಸಮಾನತೆಗೆ, ಜಾತೀಯತೆಗೆ ಕಾರಣವಾಯಿತು. ಇಂತಹ ಜಡತ್ವ ಹೊಂದಿದ ಸಮಾಜದಲ್ಲಿ ವಚನಕಾರರಂತಹ ದಾರ್ಶನಿಕರ ಮಾತುಗಳು ಹೆಚ್ಚು ಪರಿಣಾಮ ಬೀರಲಿಲ್ಲ. ಯಾವುದೇ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಚಲನಶೀಲವಾಗಿದ್ದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ’ ಎಂದರು.</p>.<p>‘ಈಗಲೂ ನಮ್ಮ ಸಮಾಜ ಗುಲಾಮಗಿರಿ ಮನಸ್ಥಿತಿಯಿಂದ ಹೊರಬಂದಿಲ್ಲ. ಮೇಲ್ಜಾತಿಯವರು ಕಂಡರೆ ಎದ್ದು ನಿಂತು ಗೌರವ ಕೊಡುವವರು, ದಲಿತರು ಬಂದರೆ ಏಕವಚನದಲ್ಲಿ ಮಾತನಾಡುತ್ತಾರೆ. ಈಗಲೂ, ಜಾತಿ–ಧರ್ಮದ ಆಧಾರದ ಮೇಲೆ ಹೋರಾಟಗಳು ನಡೆಯುತ್ತಿರುವುದು ನೋವಿನ ಸಂಗತಿ’ ಎಂದರು.</p>.<p class="Subhead">ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಅಕ್ಕಮಹಾದೇವಿ, ಅಲ್ಲಮಪ್ರಭು ಮತ್ತು ದೇಸಿ ಎಂಬ ಅಂಶಗಳು ಈ ಸಂದರ್ಭದಲ್ಲಿ ಅತಿ ಮುಖ್ಯವಾಗಿವೆ. ವಿವಾಹ ಎಂಬ ಸಂಸ್ಥೆಗೆ ವಿರುದ್ಧವಾಗಿ ನಿಂತ ಅಕ್ಕಮಹಾದೇವಿ ಹಕ್ಕಿನ ಸಂಕೇತ. ಅಲ್ಲಮ ಅರಿವಿನ ಸಂಕೇತ.</p>.<p>ಅಕ್ಕಮಹಾದೇವಿ ಹಕ್ಕಿನ ಸಂಕೇತ. ವಿವಾಹ ಅಂತಾ ಸಂಸ್ಥೆಗೆ ಎದುರಾಗಿ ನಿಂತವಳು ಅಕ್ಕಮಹಾದೇವಿ.<br />ಅಲ್ಲಮ ಅರಿವಿನ ಸಂಕೇತ. ಬಸವಣ್ಞನ ಭಕ್ತಿ ಜ್ಞಾನ, ಧರ್ಮದ ಒಳಗೆ ಒಳ ವಿಮರ್ಶಕರು, ರಾಜಕೀಯದ ಒಳ ವಿಮರ್ಶಕರು ಬೇಕಾಗಿದ್ದಾರೆ. ಇನ್ನು, ದೇಸಿ ಎನ್ನುವುದು ಆಧುನಿಕವಾದ ಮಾನಸಿಕ ಗುಣ’ ಎಂದರು.</p>.<p>‘ಓದಿದವರೆಲ್ಲ ವಿವೇಕಿಗಳಲ್ಲ. ಓದದವರೆಲ್ಲ ಅವಿವೇಕಿಗಳಲ್ಲ. ಬಹುಸಂಸ್ಕೃತಿಗಳ ಸ್ವರೂಪ ಹೊಂದಿರುವುದೇ ದೇಸಿ ಸಂಸ್ಕೃತಿ. ಇಂತಹ ಸಂಸ್ಕೃತಿಯಲ್ಲಿ ಕಟ್ಟಕಡೆಯ ವ್ಯಕ್ತಿಗೆ ಮೊಟ್ಟ ಮೊದಲ ಆದ್ಯತೆ ನೀಡುವವನೇ ನಿಜವಾದ ದೇಶಪ್ರೇಮಿ’ ಎಂದರು.</p>.<p>ಅಕ್ಕನಮನೆ ಸಮೂಹ ಸಂಸ್ಥೆ ಸಂಸ್ಥಾಪಕಿ ಸಿ.ಸಿ. ಹೇಮಲತಾ, ಚಿಂತಕಿ ಬಿ.ಟಿ. ಲಲಿತಾ ನಾಯಕ್, ಮಧುರಾ ಅಶೋಕ್ ಕುಮಾರ್, ಸ್ತ್ರೀರೋಗ ತಜ್ಞೆ ಡಾ ಪದ್ಮಿನಿ ಪ್ರಸಾದ್,ಎಚ್.ಎಂ ರೇಣುಕ ಪ್ರಸನ್ನ, ಲೇಖಕ ಡಾ. ಶಶಿಕಾಂತ ಪಟ್ಟಣ, ಮಾಜಿ ಶಾಸಕ ಅಶೋಕ ಪಟ್ಟಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಯಾವುದೇ ಜಾತಿ–ಧರ್ಮಕ್ಕೆ ಅಂಟಿಕೊಂಡವರು ಶರಣ–ಶರಣೆಯರಲ್ಲ. ಜಾತಿ ರಹಿತವಾಗಿ, ವರ್ಗರಹಿತವಾಗಿ ಸಮ ಸಮಾಜ ನಿರ್ಮಾಣದ ಧ್ಯೇಯ ಹೊಂದಿದವರು ಮಾತ್ರ ನಿಜವಾದ ಶರಣರು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.</p>.<p>ನಗರದಲ್ಲಿ ಶನಿವಾರ ಹಲವು ಸಾಧಕರಿಗೆ ‘ಅಲ್ಲಮ ಶೂನ್ಯ ಸಿರಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ‘ಹಿಂದೂಧರ್ಮ ಎನ್ನುವುದು ಶ್ರೇಣೀಕೃತವಾದುದು. ಈ ವ್ಯವಸ್ಥೆಯನ್ನು ಬದಲಾಯಿಸಲು ವಚನಗಳ ಮೂಲಕ ಜಾಗೃತಿ ಮೂಡಿಸಿದ ಅಲ್ಲಮಪ್ರಭು ಸಮ ಸಮಾಜದ ಮೊದಲ ಪ್ರತಿಪಾದಕರು’ ಎಂದರು.</p>.<p>‘ಶ್ರೇಣೀಕೃತ ವ್ಯವಸ್ಥೆಯಲ್ಲಿ ಬಹುಸಂಖ್ಯಾತರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಇದೇ ಅಸಮಾನತೆಗೆ, ಜಾತೀಯತೆಗೆ ಕಾರಣವಾಯಿತು. ಇಂತಹ ಜಡತ್ವ ಹೊಂದಿದ ಸಮಾಜದಲ್ಲಿ ವಚನಕಾರರಂತಹ ದಾರ್ಶನಿಕರ ಮಾತುಗಳು ಹೆಚ್ಚು ಪರಿಣಾಮ ಬೀರಲಿಲ್ಲ. ಯಾವುದೇ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಚಲನಶೀಲವಾಗಿದ್ದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ’ ಎಂದರು.</p>.<p>‘ಈಗಲೂ ನಮ್ಮ ಸಮಾಜ ಗುಲಾಮಗಿರಿ ಮನಸ್ಥಿತಿಯಿಂದ ಹೊರಬಂದಿಲ್ಲ. ಮೇಲ್ಜಾತಿಯವರು ಕಂಡರೆ ಎದ್ದು ನಿಂತು ಗೌರವ ಕೊಡುವವರು, ದಲಿತರು ಬಂದರೆ ಏಕವಚನದಲ್ಲಿ ಮಾತನಾಡುತ್ತಾರೆ. ಈಗಲೂ, ಜಾತಿ–ಧರ್ಮದ ಆಧಾರದ ಮೇಲೆ ಹೋರಾಟಗಳು ನಡೆಯುತ್ತಿರುವುದು ನೋವಿನ ಸಂಗತಿ’ ಎಂದರು.</p>.<p class="Subhead">ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಅಕ್ಕಮಹಾದೇವಿ, ಅಲ್ಲಮಪ್ರಭು ಮತ್ತು ದೇಸಿ ಎಂಬ ಅಂಶಗಳು ಈ ಸಂದರ್ಭದಲ್ಲಿ ಅತಿ ಮುಖ್ಯವಾಗಿವೆ. ವಿವಾಹ ಎಂಬ ಸಂಸ್ಥೆಗೆ ವಿರುದ್ಧವಾಗಿ ನಿಂತ ಅಕ್ಕಮಹಾದೇವಿ ಹಕ್ಕಿನ ಸಂಕೇತ. ಅಲ್ಲಮ ಅರಿವಿನ ಸಂಕೇತ.</p>.<p>ಅಕ್ಕಮಹಾದೇವಿ ಹಕ್ಕಿನ ಸಂಕೇತ. ವಿವಾಹ ಅಂತಾ ಸಂಸ್ಥೆಗೆ ಎದುರಾಗಿ ನಿಂತವಳು ಅಕ್ಕಮಹಾದೇವಿ.<br />ಅಲ್ಲಮ ಅರಿವಿನ ಸಂಕೇತ. ಬಸವಣ್ಞನ ಭಕ್ತಿ ಜ್ಞಾನ, ಧರ್ಮದ ಒಳಗೆ ಒಳ ವಿಮರ್ಶಕರು, ರಾಜಕೀಯದ ಒಳ ವಿಮರ್ಶಕರು ಬೇಕಾಗಿದ್ದಾರೆ. ಇನ್ನು, ದೇಸಿ ಎನ್ನುವುದು ಆಧುನಿಕವಾದ ಮಾನಸಿಕ ಗುಣ’ ಎಂದರು.</p>.<p>‘ಓದಿದವರೆಲ್ಲ ವಿವೇಕಿಗಳಲ್ಲ. ಓದದವರೆಲ್ಲ ಅವಿವೇಕಿಗಳಲ್ಲ. ಬಹುಸಂಸ್ಕೃತಿಗಳ ಸ್ವರೂಪ ಹೊಂದಿರುವುದೇ ದೇಸಿ ಸಂಸ್ಕೃತಿ. ಇಂತಹ ಸಂಸ್ಕೃತಿಯಲ್ಲಿ ಕಟ್ಟಕಡೆಯ ವ್ಯಕ್ತಿಗೆ ಮೊಟ್ಟ ಮೊದಲ ಆದ್ಯತೆ ನೀಡುವವನೇ ನಿಜವಾದ ದೇಶಪ್ರೇಮಿ’ ಎಂದರು.</p>.<p>ಅಕ್ಕನಮನೆ ಸಮೂಹ ಸಂಸ್ಥೆ ಸಂಸ್ಥಾಪಕಿ ಸಿ.ಸಿ. ಹೇಮಲತಾ, ಚಿಂತಕಿ ಬಿ.ಟಿ. ಲಲಿತಾ ನಾಯಕ್, ಮಧುರಾ ಅಶೋಕ್ ಕುಮಾರ್, ಸ್ತ್ರೀರೋಗ ತಜ್ಞೆ ಡಾ ಪದ್ಮಿನಿ ಪ್ರಸಾದ್,ಎಚ್.ಎಂ ರೇಣುಕ ಪ್ರಸನ್ನ, ಲೇಖಕ ಡಾ. ಶಶಿಕಾಂತ ಪಟ್ಟಣ, ಮಾಜಿ ಶಾಸಕ ಅಶೋಕ ಪಟ್ಟಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>