ಪಸಲಿನಿಂದ ಬರುತ್ತಿದ್ದ ಆದಾಯದಲ್ಲಿ ಬಿತ್ತನೆಗೆ ಮಾಡಿದ್ದ ಖರ್ಚು, ಸಾಲವನ್ನು ಕಳೆದು ಉಳಿದದ್ದರಲ್ಲಿ ಸಂಸಾರ ನಡೆಸುತ್ತಿದ್ದ ರೈತಾಪಿಗೆ ಭೂಸ್ವಾಧೀನಕ್ಕೆ ‘ಪರಿಹಾರ’ ರೂಪದಲ್ಲಿ ದೊಡ್ಡ ಮೊತ್ತ ನೀಡಲಾಗಿತ್ತು.ಫಲವತ್ತಾದ ಭೂಮಿಯನ್ನು ಕಳೆದುಕೊಂಡು, ಅನ್ಯ ಊರಿಗೆ ಅಪರಿಚಿತರಂತೆ ತೆರಳಿ ಅಲ್ಲಿ ನೆಲೆ ಕಂಡುಕೊಳ್ಳುವುದು ಕಷ್ಟದ ಕೆಲಸ.ಏಕಾಏಕಿ ಬಂದ ಅಧಿಕ ಹಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದೂ ಮತ್ತೊಂದು ಸವಾಲು. ಹೆಚ್ಚಿನವರು ಅದರಲ್ಲಿ ಸೋತು,ಇತ್ತ ಫಲವತ್ತಾದ ಭೂಮಿಯೂ ಇಲ್ಲ, ಅತ್ತ ಹಣವೂ ಉಳಿಯಲಿಲ್ಲ ಎನ್ನುವಂತ ಸ್ಥಿತಿಗೆ ಸಿಲುಕಿದ್ದರು. ಈ ರೀತಿಯಾಗಿ ದಿಕ್ಕೆಟ್ಟ ಹಲವರ ಕತೆಗಳನ್ನು ಈ ಹಾಡಿನಲ್ಲಿ ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.