ಬೆಂಗಳೂರು: ಮಹಾರಾಷ್ಟ್ರ ಮೂಲಕ ರಾಜ್ಯ ಪ್ರವೇಶಿಸಲಿರುವ ಮಿಡತೆಗೆ ಗಾಳಿ ಸಹಕಾರ ನೀಡುತ್ತಿಲ್ಲ. ಗಾಳಿಯ ನಡೆ ಪೂರ್ವ ದಿಕ್ಕಿನತ್ತ ಸಾಗುತ್ತಿರುವುದರಿಂದ ರಾಜ್ಯದತ್ತ ಅದು ಬರುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಪೊಂಡಾದಲ್ಲಿರುವ ಮಿಡತೆಗಳ ಹಿಂಡು ರಾಜ್ಯದತ್ತ ಬರದೆ ಪೂರ್ವ ದಿಕ್ಕಿನತ್ತ ಸಾಗಲಿದೆ ಎಂದು ಅವರು ಗುರುವಾರ ವಿಕಾಸಸೌಧದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಒಂದು ವೇಳೆ ರಾಜ್ಯಕ್ಕೆ ದಾಳಿ ಮಾಡಿದರೂ ಅದನ್ನು ನಿಯಂತ್ರಿಸುವ ರಾಸಾಯನಿಕಗಳು ಸಿದ್ದ ಇದೆ ಎಂದರು.