ಜಲಾವೃತವಾದ ಊರುಗಳಲ್ಲಿದ್ದ ಎಲ್ಲರನ್ನೂ ಸುರಕ್ಷಿತ ಸ್ಥಳ ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಕೆಲವರು ಇನ್ನೂ ನಡುಗಡ್ಡೆಗಳಲ್ಲಿಯೇ ಇದ್ದಾರೆ ಎಂಬ ಮಾತುಗಳು ಸಂತ್ರಸ್ತರ ಶಿಬಿರಗಳಲ್ಲಿ ಕೇಳಿಬರುತ್ತಿವೆ. ಅಲ್ಲಿದ್ದವರು ಪ್ರವಾಹ ಹೆಚ್ಚುವ ಮುನ್ನ ಊರು ಬಿಟ್ಟರೇ, ಬೇರೆಡೆ ಆಶ್ರಯ ಪಡೆದರೇ? ಸಂಬಂಧಿಕರ ಮನೆಗೆ ಹೋಗಿದ್ದಾರೆಯೇ ಅಥವಾ ನಾಪತ್ತೆಯಾಗಿದ್ದಾರೆಯೇ ಎನ್ನುವುದು ಖಚಿತವಾಗುತ್ತಿಲ್ಲ.