<p><strong>ಬೆಳಗಾವಿ:</strong> ಸ್ಪೈಸ್ಜೆಟ್ ಕಂಪನಿಯು ಗುರುವಾರ ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಿಂದ ಮುಂಬೈಗೆ ವಿಮಾನ ಹಾರಾಟ ಆರಂಭಿಸಿತು.</p>.<p>‘ಉಡಾನ್–3’ ಯೋಜನೆಯಡಿ ಬೆಂಗಳೂರು–ಬೆಳಗಾವಿ–ಮುಂಬೈ–ಬೆಳಗಾವಿ–ಬೆಂಗಳೂರು ಮಾರ್ಗವಾಗಿ ವಿಮಾನ ಹಾರಾಡಲಿದೆ. ಯೋಜನೆಯಡಿ ಇಲ್ಲಿ ಆರಂಭಿಸುತ್ತಿರುವ 4ನೇ ವಿಮಾನ ಇದಾಗಿದೆ. ಅಹಮದಾಬಾದ್, ಪುಣೆ ಹಾಗೂ ಹೈದರಾಬಾದ್ ವಿಮಾನಗಳು ಕಳೆದ ತಿಂಗಳು ಕಾರ್ಯಾಚರಣೆ ಆರಂಭಿಸಿವೆ. ದೇಶದ ವಿವಿಧ 13 ನಗರಗಳಿಗೆ ಇಲ್ಲಿಂದ ವಿಮಾನ ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ.</p>.<p>ವಿಮಾನನಿಲ್ದಾಣದಲ್ಲಿ ಸರಳವಾಗಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ನಿಲ್ದಾಣದ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ ಹಾಗೂ ಕೆಲವು ಪ್ರಯಾಣಿಕರು ಭಾಗವಹಿಸಿದ್ದರು.</p>.<p>ಈ ವಿಮಾನ ನಿತ್ಯವೂ ಕಾರ್ಯಾಚರಣೆ ನಡೆಸಲಿದೆ. ಮಧ್ಯಾಹ್ನ 12.05ಕ್ಕೆ ಬೆಂಗಳೂರಿನಿಂದ ಬಂದು 12.25ಕ್ಕೆ ಮುಂಬೈಗೆ ಹೊರಡುತ್ತದೆ. ಸಂಜೆ 4.05ಕ್ಕೆ ಮುಂಬೈನಿಂದ ಬಂದು 4.25ಕ್ಕೆ ಬೆಂಗಳೂರಿಗೆ ತೆರಳುತ್ತದೆ. 90 ಸೀಟುಗಳ ಸಾಮರ್ಥ್ಯದ ಈ ವಿಮಾನದಲ್ಲಿ ಮೊದಲ ದಿನವಾದ ಗುರುವಾರ ಬೆಂಗಳೂರಿನಿಂದ 55 ಪ್ರಯಾಣಿಕರು ಬಂದಿಳಿದರು. ಮುಂಬೈಗೆ 50 ಮಂದಿ ತೆರಳಿದರು.</p>.<p>ಸ್ಪೈಸ್ ಜೆಟ್ ಕಂಪನಿಯಿಂದ ಬೆಂಗಳೂರು ವಿಮಾನವನ್ನೂ ಉದ್ಘಾಟಿಸಲಾಯಿತು. ಇದು ಬುಧವಾರ ಹೊರತುಪಡಿಸಿ ವಾರದ ಎಲ್ಲ ದಿನವೂ ಹಾರಾಟ ನಡೆಸಲಿದೆ. ಬೆಂಗಳೂರಿನಿಂದ ಸಂಜೆ 6.05ಕ್ಕೆ ಬರುವ ಈ ವಿಮಾನ 6.25ಕ್ಕೆ ನಿರ್ಗಮಿಸುತ್ತದೆ.</p>.<p>ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ (ದಕ್ಷಿಣ) ಎನ್. ಕಿಶೋರ್, ನಿಲ್ದಾಣ ವ್ಯವಸ್ಥಾಪಕ ನಿಯಾಜ್ ಶಿರಹಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಸ್ಪೈಸ್ಜೆಟ್ ಕಂಪನಿಯು ಗುರುವಾರ ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಿಂದ ಮುಂಬೈಗೆ ವಿಮಾನ ಹಾರಾಟ ಆರಂಭಿಸಿತು.</p>.<p>‘ಉಡಾನ್–3’ ಯೋಜನೆಯಡಿ ಬೆಂಗಳೂರು–ಬೆಳಗಾವಿ–ಮುಂಬೈ–ಬೆಳಗಾವಿ–ಬೆಂಗಳೂರು ಮಾರ್ಗವಾಗಿ ವಿಮಾನ ಹಾರಾಡಲಿದೆ. ಯೋಜನೆಯಡಿ ಇಲ್ಲಿ ಆರಂಭಿಸುತ್ತಿರುವ 4ನೇ ವಿಮಾನ ಇದಾಗಿದೆ. ಅಹಮದಾಬಾದ್, ಪುಣೆ ಹಾಗೂ ಹೈದರಾಬಾದ್ ವಿಮಾನಗಳು ಕಳೆದ ತಿಂಗಳು ಕಾರ್ಯಾಚರಣೆ ಆರಂಭಿಸಿವೆ. ದೇಶದ ವಿವಿಧ 13 ನಗರಗಳಿಗೆ ಇಲ್ಲಿಂದ ವಿಮಾನ ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ.</p>.<p>ವಿಮಾನನಿಲ್ದಾಣದಲ್ಲಿ ಸರಳವಾಗಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ನಿಲ್ದಾಣದ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ ಹಾಗೂ ಕೆಲವು ಪ್ರಯಾಣಿಕರು ಭಾಗವಹಿಸಿದ್ದರು.</p>.<p>ಈ ವಿಮಾನ ನಿತ್ಯವೂ ಕಾರ್ಯಾಚರಣೆ ನಡೆಸಲಿದೆ. ಮಧ್ಯಾಹ್ನ 12.05ಕ್ಕೆ ಬೆಂಗಳೂರಿನಿಂದ ಬಂದು 12.25ಕ್ಕೆ ಮುಂಬೈಗೆ ಹೊರಡುತ್ತದೆ. ಸಂಜೆ 4.05ಕ್ಕೆ ಮುಂಬೈನಿಂದ ಬಂದು 4.25ಕ್ಕೆ ಬೆಂಗಳೂರಿಗೆ ತೆರಳುತ್ತದೆ. 90 ಸೀಟುಗಳ ಸಾಮರ್ಥ್ಯದ ಈ ವಿಮಾನದಲ್ಲಿ ಮೊದಲ ದಿನವಾದ ಗುರುವಾರ ಬೆಂಗಳೂರಿನಿಂದ 55 ಪ್ರಯಾಣಿಕರು ಬಂದಿಳಿದರು. ಮುಂಬೈಗೆ 50 ಮಂದಿ ತೆರಳಿದರು.</p>.<p>ಸ್ಪೈಸ್ ಜೆಟ್ ಕಂಪನಿಯಿಂದ ಬೆಂಗಳೂರು ವಿಮಾನವನ್ನೂ ಉದ್ಘಾಟಿಸಲಾಯಿತು. ಇದು ಬುಧವಾರ ಹೊರತುಪಡಿಸಿ ವಾರದ ಎಲ್ಲ ದಿನವೂ ಹಾರಾಟ ನಡೆಸಲಿದೆ. ಬೆಂಗಳೂರಿನಿಂದ ಸಂಜೆ 6.05ಕ್ಕೆ ಬರುವ ಈ ವಿಮಾನ 6.25ಕ್ಕೆ ನಿರ್ಗಮಿಸುತ್ತದೆ.</p>.<p>ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ (ದಕ್ಷಿಣ) ಎನ್. ಕಿಶೋರ್, ನಿಲ್ದಾಣ ವ್ಯವಸ್ಥಾಪಕ ನಿಯಾಜ್ ಶಿರಹಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>