ಬೆಂಗಳೂರು: ನೂತನ 10 ಮಂದಿ ಸಚಿವರಿಗೆ ಸೋಮವಾರ ಬಿ.ಎಸ್ ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ.
ಯಾರಿಗೆ ಯಾವ್ಯಾವ ಇಲಾಖೆ?
-ಬಿ.ಎಸ್ ಯಡಿಯೂರಪ್ಪ (ಸಿಎಂ): ಹಣಕಾಸು, ಇಂಧನ, ಬೆಂಗಳೂರು ನಗರ ಅಭಿವೃದ್ಧಿ, ವಾರ್ತಾ ಇಲಾಖೆ, ಗುಪ್ತವಾರ್ತೆ ಸೇರಿದಂತೆ ಹಂಚಿಕೆಯಾಗದೇ ಉಳಿದ ಖಾತೆಗಳು
-ಕಾರಜೋಳ (ಡಿಸಿಎಂ): ಲೋಕೋಪಯೋಗಿ, ಸಮಾಜ ಕಲ್ಯಾಣ
-ಆಶ್ವತ್ಥನಾರಾಯಣ (ಡಿಸಿಎಂ): ಉನ್ನತ ಶಿಕ್ಷಣ, ಐಟಿ–ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ
-ಲಕ್ಷ್ಮಣ ಸವದಿ (ಡಿಸಿಎಂ): ಸಾರಿಗೆ
-ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
-ಆರ್.ಅಶೋಕ: ಕಂದಾಯ
-ಜಗದೀಶ ಶೆಟ್ಟರ್: ಬೃಹತ್ –ಮಧ್ಯಮ ಕೈಗಾರಿಕೆ
-ಶ್ರೀರಾಮುಲು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
-ಎಸ್ ಸುರೇಶ್ ಕುಮಾರ್: ಪ್ರಾಥಮಿಕ–ಪ್ರೌಢ ಶಿಕ್ಷಣ ಮತ್ತು ಸಕಾಲ
-ಸಿ.ಟಿ ರವಿ: ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ
-ಬಸವರಾಜ ಬೊಮ್ಮಾಯಿ: ಗೃಹ
-ಕೋಟ ಶ್ರೀನಿವಾಸ ಪೂಜಾರಿ: ಮುಜರಾಯಿ, ಮೀನುಗಾರಿಕೆ, ಬಂದರ ಮತ್ತು ಒಳನಾಡು ಸಾರಿಗೆ