ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯಸಭಾ ಸ್ಥಾನ ತೆರವುಗೊಳ್ಳುತ್ತಿದ್ದು, ಸದ್ಯದಲ್ಲಿಯೇ ಚುನಾವಣೆ ನಡೆಯಲಿದೆ. ಈ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕು. ಈಗಾಗಲೇ ಅವರು ಭರವಸೆ ನೀಡಿದ್ದರ ಮೇರೆಗೆ ನಾವು ಹೋಗಿ ಕೇಳಿದ್ದೇವೆ’ ಎಂದು ಹೇಳಿದರು.