ಬೆಂಗಳೂರು: ಕುಮಾರಸ್ವಾಮಿ ಮಂಡಿಸಿದ ಬಜೆಟ್ನಲ್ಲಿ ಕುಡಿಯುವ ನೀರು, ವಯಸ್ಸಾದವರಿಗೆ ಮಾಸಾಶನದ ಮೊತ್ತ ಹೆಚ್ಚಳದಂತಹ ಕೊಡುಗೆಗಳನ್ನು ನೀಡಿದರು.
‘ಜಲಧಾರೆ’ ಯೋಜನೆ:ಮೇಲ್ಮೈ ಜಲಮೂಲಗಳಿಂದ ಕುಡಿಯುವ ನೀರು ಒದಗಿಸುವ ಜಲಧಾರೆ ಯೋಜನೆ ಜಾರಿಯನ್ನು ಘೋಷಿಸಿದರು.
ಮಾಸಾಶನ ಹೆಚ್ಚಳ:65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಪ್ರಾರಂಭಿಸಲಾಗಿದ್ದ ಸಂಧ್ಯಾ ಸುರಕ್ಷಾ ಯೋಜನೆಯಡಿ ನೀಡಲಾಗುತ್ತಿದ್ದ ಮಾಸಾಶನದ ಮೊತ್ತವನ್ನು ₹600ರಿಂದ ₹1000ಕ್ಕೆ ಹೆಚ್ಚಳಿಸಲಾಗಿದೆ.
ನಗರಗಳ ಬೆಳವಣಿಗೆಗೆ ಕಡಿವಾಣ:ನಗರಗಳ ಅನಿಯಂತ್ರಿತ ಬೆಳವಣಿಗೆಗೆ ಕಡಿವಾಣ ಹಾಗೂ ಮೂಲ ಸೌಕರ್ಯ ಒದಗಿಸುವ ಬೃಹತ್ ಸವಾಲು ಸರ್ಕಾರದ ಮುಂದಿದೆ ಎಂದು ಕುಮಾರಸ್ವಾಮಿ ಹೇಳಿದರು.