ಸಚಿವ ಸಂಪುಟದಲ್ಲಿ ಒಟ್ಟು 5 ಸ್ಥಾನಗಳು ಖಾಲಿ ಇದೆ . ನಾಗರಾಜ್, ಶಂಕರ್ ಮತ್ತು ಉಮೇಶ ಕತ್ತಿಗೆ ನೀಡಿದರೆ ಮೂರು ಭರ್ತಿ ಆಗುತ್ತದೆ. ಚುನಾವಣೆ ಫಲಿತಾಂಶ ಪ್ರಶ್ನಿಸಿದ ಪ್ರಕರಣ ಕೋರ್ಟ್ನಲ್ಲಿ ಇರುವುದರಿಂದ ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿಲ್ಲ. ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಅನರ್ಹಗೊಂಡಿರುವ ಈ ಕ್ಷೇತ್ರಗಳ ಮುನಿರತ್ನ
ಹಾಗೂ ಪ್ರತಾಪಗೌಡ ಪಾಟೀಲ ಅವರಿಗಾಗಿ ಎರಡು ಸ್ಥಾನಗಳನ್ನು ಖಾಲಿ ಉಳಿಸಲಾಗುತ್ತದೆಯೋ ಅಥವಾ ಈ ಹೊತ್ತಿನಲ್ಲಿ ಸಂಘ ಪರಿವಾರ ಹಿನ್ನೆಲೆಯ ಶಾಸಕರಿಗೆ ನೀಡಲಾಗುತ್ತದೆಯೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ.