ಪಕ್ಷದ 13 ಮಂದಿ ಅತೃಪ್ತ ಶಾಸಕರು ಹಾಗೂ ಅಸೌಖ್ಯದ ಕಾರಣ ನೀಡಿ ಸದನಕ್ಕೆ ಗೈರಾಗಿದ್ದ ಶ್ರೀಮಂತ ಪಾಟೀಲ ಅವರನ್ನು ಸಭಾಧ್ಯಕ್ಷರು ಅನರ್ಹಗೊಳಿಸಿದ್ದರಿಂದ ಪಕ್ಷ ಒಂದು ರೀತಿಯಲ್ಲಿ ಹುಮ್ಮಸ್ಸಿನಲ್ಲಿದ್ದರೂ, ವಿಶ್ವಾಸಮತ ಗಳಿಸುವ ನಿರೀಕ್ಷೆಯಲ್ಲಿರುವ ಯಡಿಯೂರಪ್ಪ ಸರ್ಕಾರವನ್ನು ಪ್ರಮುಖ ವಿರೋಧ ಪಕ್ಷವಾಗಿ ಕಟ್ಟಿಹಾಕುವ ನಿಟ್ಟಿನಲ್ಲಿ ಸಭೆ ನಡೆಯಲಿದೆ.