ಬೆಂಗಳೂರು: ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆಗೆ ಉತ್ತಮ ಅವಕಾಶ ಇದ್ದು, ಸರ್ಕಾರ ಉದ್ಯಮಿಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದೆ. ನೂತನ ಕೈಗಾರಿಕಾ ನೀತಿಯೂ ಉದ್ಯಮಸ್ನೇಹಿಯಾಗಿದೆ. ಜಾಗತಿಕ ಸಮುದಾಯ ಇದನ್ನು ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಅಮೆರಿಕದ ಪ್ರವಾಸದಲ್ಲಿರುವ ಅವರು ಮಂಗಳವಾರ ವಾಷಿಂಗ್ಟನ್ ಡಿಸಿ ಸಮೀಪ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿ, ದೇಶದಲ್ಲಿ ಜಿಡಿಪಿ ಪ್ರಗತಿ ಶೇ 7.2ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ 10ರಷ್ಟಿದೆ. ರಾಜ್ಯದಲ್ಲಿ ಕೌಶಲಾಭಿವೃದ್ಧಿಗೂ ವಿಪುಲ ಅವಕಾಶ ಇದೆ ಎಂದರು.
ಭಾರತದ ಒಟ್ಟು ಯಂತ್ರ ಬಿಡಿಭಾಗಗಳಉತ್ಪಾದನೆಯಲ್ಲಿ ರಾಜ್ಯದಪಾಲು ಶೇ 50ರಷ್ಟಿದೆ, ಐಟಿ ರಫ್ತು ಶೇ39ರಷ್ಟಿದೆ. ಶೇ 33ರಷ್ಟು ಬಯೊಟೆಕ್ ರಫ್ತು ಇದೆ. ಮೂಲಸೌಲಭ್ಯ ಅಭಿವೃದ್ಧಿಗೂ ವಿಶೇಷ ಗಮನ ಹರಿಸಲಾಗಿದೆ. ರಾಜ್ಯದಲ್ಲಿ 9 ಕಡೆ ಉತ್ಪಾದನಾ ಉದ್ದೇಶಿತ ಕ್ಲಸ್ಟರ್ಗಳನ್ನು ರಚಿಸಲಾಗಿದೆ ಎಂದರು.