‘ನಗರದ ಹೋಟೆಲ್ನಲ್ಲಿ ಕಾಂಗ್ರೆಸ್ ಪಕ್ಷದ ಸಭೆ ಮುಗಿದ ಬಳಿಕ ಗೋವಾಕ್ಕೆ ತೆರಳಿದ್ದೆ. ಆಗ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಮುಂಬೈಯ ವೈದ್ಯರಿಗೆ ಕರೆ ಮಾಡಿದ್ದೆ. ಆಸ್ಪತ್ರೆಗೆ ಬರುವಂತೆ ತಿಳಿಸಿದ್ದರು. ಹಾಗಾಗಿ, ಅಲ್ಲಿಗೆ ಹೋಗಿದ್ದೇನೆ ಹೊರತು ಯಾರೂ ಅಪಹರಣ ಮಾಡಿಲ್ಲ’ ಎಂದು ಶ್ರೀಮಂತ ಪಾಟೀಲ ತಿಳಿಸಿದ್ದಾಗಿ ಸಭಾಧ್ಯಕ್ಷರು ವಿಧಾನಸಭೆಗೆ ತಿಳಿಸಿದರು.