ಆದರೆ, ಪ್ರಕರಣಗಳ ಏರಿಕೆಯ ಹಿಂದೆಯೇ ಆರೋಗ್ಯ ಇಲಾಖೆ, ಈಗ ಸಂಪರ್ಕಿತರ ಪತ್ತೆ ಕಾರ್ಯ ದಿಂದಲೂ ಹಿಂದೆ ಸರಿದಿದೆ. ಸಿಬ್ಬಂದಿ ಕೊರತೆ, ಕ್ವಾರಂಟೈನ್ ಕೇಂದ್ರದಲ್ಲಿ ಸ್ಥಳಾವಕಾಶದ ಅಭಾವವೇ ಇದಕ್ಕೆ ಪ್ರಮುಖ ಕಾರಣವಾಗಿದೆ.ರೋಗಿಗಳ ಜೊತೆಗೆ ಸಂಪರ್ಕಕ್ಕೆ ಬಂದಿದ್ದವರು ಸ್ವಯಂಪ್ರೇರಣೆಯಿಂದ ವರದಿ ಮಾಡಿ ಕೊಳ್ಳಲು ಹಿಂದೇಟು ಹಾಕು ತ್ತಿದ್ದಾರೆ. ಇದರಿಂದಾಗಿ ಪ್ರಕರಣಗಳು ತಡವಾಗಿ ಬೆಳಕಿಗೆ ಬರುತ್ತಿವೆ.