ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕೊರೊನಾ ಸೋಂಕು ಭೀತಿ, ರಸ್ತೆ ತೋಡಿದ ಗ್ರಾಮಸ್ಥರು 

Last Updated 26 ಮಾರ್ಚ್ 2020, 10:02 IST
ಅಕ್ಷರ ಗಾತ್ರ

ಯರಗೋಳ (ಯಾದಗಿರಿ ಜಿಲ್ಲೆ): ಜಿಲ್ಲೆಯ ಯರಗೋಳ ಗ್ರಾಮದ ಜನತೆಯಲ್ಲಿ ಕೊರೊನಾ ಸೋಂಕಿನ ಆತಂಕ ಹೆಚ್ಚಾಗಿದ್ದು, ಬೇರೆ ಗ್ರಾಮದ ಜನತೆ ಪ್ರವೇಶ ಮಾಡದಂತೆ ತಡೆಯಲು ಗ್ರಾಮದ ಹೊರವಲಯದಲ್ಲಿರುವ ಯಾಗಾಪುರ ರಸ್ತೆಯನ್ನು ತುಂಡರಿಸಿದ್ದಾರೆ.

ದೇಶದಲ್ಲಿ ಪ್ರಥಮವಾಗಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾದ ಕಲಬುರ್ಗಿ ಜಿಲ್ಲೆಯ 76 ವರ್ಷದ ವೃದ್ಧ ಸಿದ್ಧಿಕಿ ಮೃತರಾದ ನಂತರ ಕಲಬುರ್ಗಿ ಜಿಲ್ಲೆಗೆ ಹೊಂದಿಕೊಂಡಿರುವ ಗ್ರಾಮದಲ್ಲಿ ಆತಂಕ ಶುರುವಾಗಿದೆ.

ಯರಗೋಳ ಗ್ರಾಮದಿಂದ 3 ಕಿ. ಮೀಟರ್ ದೂರದಲ್ಲಿ ಕಲಬುರ್ಗಿ ಜಿಲ್ಲೆಯ ನಾಲವಾರ ರೈಲು ನಿಲ್ದಾಣಕ್ಕೆ ವಾರದ ಹಿಂದೆ ನೂರಾರು ಸಂಖ್ಯೆಯ ಜನರು ಬೆಂಗಳೂರು ಮತ್ತು ಮುಂಬಯಿ ನಗರದಿಂದ ಆಗಮಿಸಿದ್ದಾರೆ.

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ತಾಂಡ ನಿವಾಸಿಗಳು ಮತ್ತು ಗ್ರಾಮಸ್ಥರು ಮುಂಬಯಿಯ ಮೀನು ಉದ್ಯಮ ಮತ್ತು ಬೆಂಗಳೂರಿನ ಕಟ್ಟಡ ಕಟ್ಟುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಲಾಡ್ಲಾಪುರ ಜಾತ್ರೆ ಮತ್ತು ಯುಗಾದಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಸಾವಿರಾರು ಸಂಖ್ಯೆಯ ಜನರು ಆಗಮಿಸಿದ್ದರು.

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದ್ದು,
ನಮ್ಮ ಗ್ರಾಮದ ಜನತೆಗೆ ಕೊರೊನಾ ಸೋಂಕು ತಗಲದಂತೆ ಮುನ್ನೆಚ್ಚರಿಕೆಯಾಗಿ ರಸ್ತೆಯನ್ನು ತುಂಡರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT