ಬೆಂಗಳೂರು: ರಾಜ್ಯದಲ್ಲಿ ಕೋವಿಡ್–19ಸೋಂಕಿನಿಂದಾಗಿ ಮಂಗಳವಾರ ಮೂವರುಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ಕಲಬುರ್ಗಿಯ 55 ವರ್ಷ ವಯಸ್ಸಿನ ವ್ಯಕ್ತಿ,ಬೆಂಗಳೂರಿನ 65 ವರ್ಷದ ವೃದ್ಧ ಹಾಗ ಗದಗ ಜಿಲ್ಲೆಯ 69 ವಯಸ್ಸಿನ ವೃದ್ಧ ಮೃತಪಟ್ಟವರು.
ಮಾತ್ರವಲ್ಲದೆ ಇಂದು11 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ258ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆ ಹಾಗೂ ಕಲಬುರ್ಗಿಯಲ್ಲಿ ತಲಾ ಮೂವರಿಗೆ ಸೊಂಕು ತಗುಲಿದೆ. ಬೆಂಗಳೂರಿನ ಇಬ್ಬರಲ್ಲಿ ಇಂದು ಸೋಂಕು ದೃಢ ಪಟ್ಟಿರುವುದರಿಂದ, ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.
ಉಳಿದಂತೆ ಬೆಳಗಾವಿ, ವಿಜಯಪುರು ಹಾಗೂ ಚಿಕ್ಕಬಳ್ಳಾಪುರದ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ.
ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದರೂ 10,000ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಲಾಕ್ಡೌನ್ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಲಾಗಿದೆ.