ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಿಂದ ಬಂದು ಮನೆ ಸೇರಿ ಆತಂಕ ಮೂಡಿಸಿದ ವ್ಯಕ್ತಿ!

Last Updated 24 ಮಾರ್ಚ್ 2020, 7:29 IST
ಅಕ್ಷರ ಗಾತ್ರ

ಕೂಡ್ಲಿಗಿ: ಪಟ್ಟಣದ 3ನೇ ವಾರ್ಡಿನ ವ್ಯಕ್ತಿಯೊಬ್ಬ ಮೂರು ದಿನಗಳ ಹಿಂದೆ ಪಶ್ಚಿಮ ಬಂಗಾಳದಿಂದ ಬಂದು ಮನೆ ಸೇರಿರುವ ವ್ಯಕ್ತಿಯೊಬ್ಬರು ಸುತ್ತಲ ಪ್ರದೇಶದಲ್ಲಿ ಆತಂಕ ಮೂಡಿಸಿದ್ದಾರೆ.

ವ್ಯಕ್ತಿ ಮನೆಯಿಂದಹೊರ ಬರದೆ ಒಳಗಡೆಯೇ ಉಳಿದುಕೊಂಡ್ಡಿದ್ದಾರೆ. ಸೋಮವಾರ ಸಂಜೆ ಅವರು ಮನೆಗೆ ಬಂದಿರುವ ವಿಷಯ ಸುತ್ತಲಿನ ನಿವಾಸಿಗಳಿಗೆ ಗೊತ್ತಾಗಿದೆ. ಮೂರು ದಿನಗಳಿಂದ ಮನೆಯಿಂದ ಹೊರ ಬಂದಿಲ್ಲ ಎಂದರೆ ಅವರಿಗೆಕೊರೊನಾ ವೈರಸ್‌ ಸೋಂಕು ಇರಬೇಕು ಎಂಬ ಶಂಕೆ ಸ್ಥಳೀಯ ಜನರಲ್ಲಿ ಆವರಿಸಿದೆ.

ವ್ಯಕ್ತಿಯ ಮಾಹಿತಿಯನ್ನು ತಹಶೀಲ್ದಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳ ಗಮಕ್ಕೆ ತರಲಾಗಿದೆ. ವಿಷಯ ತಿಳಿದ ಕೊರೊನಾ ವೈರಸ್‌ ಟಾಸ್ಕ ಪೊರ್ಸ್ ಸಮಿತಿಯ ಸದಸ್ಯರು ಶಂಕಿತನ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ವ್ಯಕ್ತಿಯಲ್ಲಿ ಕೊರೊನಾ ವೈರಸ್‌ ಸೋಂಕು ಉಂಟಾಗಿರುವಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ವೈದ್ಯರು ಖಚಿತಪಡಿಸಿಕೊಂಡಿದ್ದಾರೆ.ಅಲ್ಲದೆ, ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ಸೂಚನೆ ನೀಡಿದ್ದಾರೆ. ನಂತರ ಸುತ್ತಲಿನ ಜನರಿಗೆ ತಾವು ಕೂಡ ಯಾರು ಮನೆಯಿಂದ ಹೊರ ಬಂದು ಗುಂಪು ಸೇರದಂತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT