<p><strong>ಕೂಡ್ಲಿಗಿ:</strong> ಪಟ್ಟಣದ 3ನೇ ವಾರ್ಡಿನ ವ್ಯಕ್ತಿಯೊಬ್ಬ ಮೂರು ದಿನಗಳ ಹಿಂದೆ ಪಶ್ಚಿಮ ಬಂಗಾಳದಿಂದ ಬಂದು ಮನೆ ಸೇರಿರುವ ವ್ಯಕ್ತಿಯೊಬ್ಬರು ಸುತ್ತಲ ಪ್ರದೇಶದಲ್ಲಿ ಆತಂಕ ಮೂಡಿಸಿದ್ದಾರೆ.</p>.<p>ವ್ಯಕ್ತಿ ಮನೆಯಿಂದಹೊರ ಬರದೆ ಒಳಗಡೆಯೇ ಉಳಿದುಕೊಂಡ್ಡಿದ್ದಾರೆ. ಸೋಮವಾರ ಸಂಜೆ ಅವರು ಮನೆಗೆ ಬಂದಿರುವ ವಿಷಯ ಸುತ್ತಲಿನ ನಿವಾಸಿಗಳಿಗೆ ಗೊತ್ತಾಗಿದೆ. ಮೂರು ದಿನಗಳಿಂದ ಮನೆಯಿಂದ ಹೊರ ಬಂದಿಲ್ಲ ಎಂದರೆ ಅವರಿಗೆಕೊರೊನಾ ವೈರಸ್ ಸೋಂಕು ಇರಬೇಕು ಎಂಬ ಶಂಕೆ ಸ್ಥಳೀಯ ಜನರಲ್ಲಿ ಆವರಿಸಿದೆ.</p>.<p>ವ್ಯಕ್ತಿಯ ಮಾಹಿತಿಯನ್ನು ತಹಶೀಲ್ದಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳ ಗಮಕ್ಕೆ ತರಲಾಗಿದೆ. ವಿಷಯ ತಿಳಿದ ಕೊರೊನಾ ವೈರಸ್ ಟಾಸ್ಕ ಪೊರ್ಸ್ ಸಮಿತಿಯ ಸದಸ್ಯರು ಶಂಕಿತನ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.</p>.<p>ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ಉಂಟಾಗಿರುವಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ವೈದ್ಯರು ಖಚಿತಪಡಿಸಿಕೊಂಡಿದ್ದಾರೆ.ಅಲ್ಲದೆ, ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ಸೂಚನೆ ನೀಡಿದ್ದಾರೆ. ನಂತರ ಸುತ್ತಲಿನ ಜನರಿಗೆ ತಾವು ಕೂಡ ಯಾರು ಮನೆಯಿಂದ ಹೊರ ಬಂದು ಗುಂಪು ಸೇರದಂತೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ:</strong> ಪಟ್ಟಣದ 3ನೇ ವಾರ್ಡಿನ ವ್ಯಕ್ತಿಯೊಬ್ಬ ಮೂರು ದಿನಗಳ ಹಿಂದೆ ಪಶ್ಚಿಮ ಬಂಗಾಳದಿಂದ ಬಂದು ಮನೆ ಸೇರಿರುವ ವ್ಯಕ್ತಿಯೊಬ್ಬರು ಸುತ್ತಲ ಪ್ರದೇಶದಲ್ಲಿ ಆತಂಕ ಮೂಡಿಸಿದ್ದಾರೆ.</p>.<p>ವ್ಯಕ್ತಿ ಮನೆಯಿಂದಹೊರ ಬರದೆ ಒಳಗಡೆಯೇ ಉಳಿದುಕೊಂಡ್ಡಿದ್ದಾರೆ. ಸೋಮವಾರ ಸಂಜೆ ಅವರು ಮನೆಗೆ ಬಂದಿರುವ ವಿಷಯ ಸುತ್ತಲಿನ ನಿವಾಸಿಗಳಿಗೆ ಗೊತ್ತಾಗಿದೆ. ಮೂರು ದಿನಗಳಿಂದ ಮನೆಯಿಂದ ಹೊರ ಬಂದಿಲ್ಲ ಎಂದರೆ ಅವರಿಗೆಕೊರೊನಾ ವೈರಸ್ ಸೋಂಕು ಇರಬೇಕು ಎಂಬ ಶಂಕೆ ಸ್ಥಳೀಯ ಜನರಲ್ಲಿ ಆವರಿಸಿದೆ.</p>.<p>ವ್ಯಕ್ತಿಯ ಮಾಹಿತಿಯನ್ನು ತಹಶೀಲ್ದಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳ ಗಮಕ್ಕೆ ತರಲಾಗಿದೆ. ವಿಷಯ ತಿಳಿದ ಕೊರೊನಾ ವೈರಸ್ ಟಾಸ್ಕ ಪೊರ್ಸ್ ಸಮಿತಿಯ ಸದಸ್ಯರು ಶಂಕಿತನ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.</p>.<p>ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ಉಂಟಾಗಿರುವಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ವೈದ್ಯರು ಖಚಿತಪಡಿಸಿಕೊಂಡಿದ್ದಾರೆ.ಅಲ್ಲದೆ, ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ಸೂಚನೆ ನೀಡಿದ್ದಾರೆ. ನಂತರ ಸುತ್ತಲಿನ ಜನರಿಗೆ ತಾವು ಕೂಡ ಯಾರು ಮನೆಯಿಂದ ಹೊರ ಬಂದು ಗುಂಪು ಸೇರದಂತೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>