<p><strong>ಕಲಬುರ್ಗಿ</strong>: ಕೊರೊನಾ ವಿಚಾರದಲ್ಲಿ ಜನರಿಗಾಗಿ ಹಣ ಖರ್ಚು ಮಾಡಲು ಜಿಲ್ಲಾಧಿಕಾರಿಗಳು ಹಿಂದೆ ಮುಂದೆ ನೋಡಬಾರದು. ಸರ್ಕಾರಕ್ಕೆ ನೀವು ಒಂದು ರುಪಾಯಿಯನ್ನೂ ಉಳಿಸಬೇಕಿಲ್ಲ. ಜನರಿಗೆ ಸೌಕರ್ಯ ಕಲ್ಪಿಸಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಾಕೀತು ಮಾಡಿದರು.</p>.<p>ನಗರದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಜನರಿಗಾಗಿ ಯಾವ ಅಧಿಕಾರಿ ಹೆಚ್ಚು ಹಣ ಖರ್ಚು ಮಾಡುತ್ತಾರೋ ಅವರೇ ನಿಜವಾದ ಪ್ರಾಮಾಣಿಕರು ಎಂದೇ ನಾನು ಪರಿಗಣಿಸುತ್ತೇನೆ ಎಂದರು.</p>.<p>ಜಿಲ್ಲಾ ಖಜಾನೆಯಲ್ಲಿ ಹಣ ಇದೆಯೋ ಇಲ್ಲೋ? ಇಲ್ಲದಿದ್ದರೆ ಹೇಳಿ ತಕ್ಷಣ ಬಿಡುಗಡೆ ಮಾಡಿಸುತ್ತೇನೆ. ನಿಮ್ಮ ಅಕೌಂಟಿನಲ್ಲಿ ಉಳಿಯುವ ಸರ್ಕಾರದ ಹಣ ಯಾರಿಗೆ ಬೇಕು. ಅದನ್ನು ಜನರಿಗಾಗಿ ಕೈ ಬಿಚ್ಚಿ ಖರ್ಚು ಮಾಡಿ ಎಂದೂ ಅವರು ತಾಕೀತು ಮಾಡಿದು.</p>.<p>ಕೇಂದ್ರ ಸರ್ಕಾರ ಅಂತರರಾಜ್ಯ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಸರ್ಕಾರದ ಮಾರ್ಗಸೂಚಿಯಂತೆ ತಮ್ಮ ರಾಜ್ಯಗಳಿಗೆ ಮರಳಬಹುದು. ಈ ಸಂಬಂಧ ರಾಜ್ಯ ಸರ್ಕಾರ 11 ಜನ ಅಧಿಕಾರಿಗಳ ತಂಡ ರಚಿಸಿದೆ ಎಂದರು.</p>.<p>ಬೇರೆ ರಾಜ್ಯಗಳಿಂದ ಬರುವವರು ಯಾರೇ ಆಗಲಿ ತಮ್ಮ ಸ್ವಂತ ಖರ್ಚಿನಲ್ಲಿ ಬರಬೇಕು. ಸರ್ಕಾರ ವಾಹನಗಳ ವ್ಯವಸ್ಥೆ ಮಾಡುವುದಿಲ್ಲ. ಕಾರ್ಮಿಕರು ಸಾಮೂಹಿಕವಾಗಿ ಒಂದೇ ಸ್ಥಳಕ್ಕೆ ಬರುವವರಿಗೆ ಬೇಕಾದರೆ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಇದರ ವೆಚ್ಚವನ್ನು ಅವರೇ ಭರಿಸಬೇಕೆಂದು ತಿಳಿಸಿದರು.</p>.<p>ಹಾಗೆ ಬರುವ ಕಾರ್ಮಿಕರನ್ನು ಗಡಿಯಲ್ಲೇ ತಡೆದು ತಪಾಸಣೆ ನಡೆಸಬೇಕು. ನಂತರ ಅವರನ್ನು ಕಡ್ಡಾಯವಾಗಿ ಹೊಂ ಕ್ವಾರಂಟೈನ್ ಮಾಡಬೇಕೆಂದು ಡಿಸಿಎಂ ಕಾರಜೋಳ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ</strong>: ಕೊರೊನಾ ವಿಚಾರದಲ್ಲಿ ಜನರಿಗಾಗಿ ಹಣ ಖರ್ಚು ಮಾಡಲು ಜಿಲ್ಲಾಧಿಕಾರಿಗಳು ಹಿಂದೆ ಮುಂದೆ ನೋಡಬಾರದು. ಸರ್ಕಾರಕ್ಕೆ ನೀವು ಒಂದು ರುಪಾಯಿಯನ್ನೂ ಉಳಿಸಬೇಕಿಲ್ಲ. ಜನರಿಗೆ ಸೌಕರ್ಯ ಕಲ್ಪಿಸಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಾಕೀತು ಮಾಡಿದರು.</p>.<p>ನಗರದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಜನರಿಗಾಗಿ ಯಾವ ಅಧಿಕಾರಿ ಹೆಚ್ಚು ಹಣ ಖರ್ಚು ಮಾಡುತ್ತಾರೋ ಅವರೇ ನಿಜವಾದ ಪ್ರಾಮಾಣಿಕರು ಎಂದೇ ನಾನು ಪರಿಗಣಿಸುತ್ತೇನೆ ಎಂದರು.</p>.<p>ಜಿಲ್ಲಾ ಖಜಾನೆಯಲ್ಲಿ ಹಣ ಇದೆಯೋ ಇಲ್ಲೋ? ಇಲ್ಲದಿದ್ದರೆ ಹೇಳಿ ತಕ್ಷಣ ಬಿಡುಗಡೆ ಮಾಡಿಸುತ್ತೇನೆ. ನಿಮ್ಮ ಅಕೌಂಟಿನಲ್ಲಿ ಉಳಿಯುವ ಸರ್ಕಾರದ ಹಣ ಯಾರಿಗೆ ಬೇಕು. ಅದನ್ನು ಜನರಿಗಾಗಿ ಕೈ ಬಿಚ್ಚಿ ಖರ್ಚು ಮಾಡಿ ಎಂದೂ ಅವರು ತಾಕೀತು ಮಾಡಿದು.</p>.<p>ಕೇಂದ್ರ ಸರ್ಕಾರ ಅಂತರರಾಜ್ಯ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಸರ್ಕಾರದ ಮಾರ್ಗಸೂಚಿಯಂತೆ ತಮ್ಮ ರಾಜ್ಯಗಳಿಗೆ ಮರಳಬಹುದು. ಈ ಸಂಬಂಧ ರಾಜ್ಯ ಸರ್ಕಾರ 11 ಜನ ಅಧಿಕಾರಿಗಳ ತಂಡ ರಚಿಸಿದೆ ಎಂದರು.</p>.<p>ಬೇರೆ ರಾಜ್ಯಗಳಿಂದ ಬರುವವರು ಯಾರೇ ಆಗಲಿ ತಮ್ಮ ಸ್ವಂತ ಖರ್ಚಿನಲ್ಲಿ ಬರಬೇಕು. ಸರ್ಕಾರ ವಾಹನಗಳ ವ್ಯವಸ್ಥೆ ಮಾಡುವುದಿಲ್ಲ. ಕಾರ್ಮಿಕರು ಸಾಮೂಹಿಕವಾಗಿ ಒಂದೇ ಸ್ಥಳಕ್ಕೆ ಬರುವವರಿಗೆ ಬೇಕಾದರೆ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಇದರ ವೆಚ್ಚವನ್ನು ಅವರೇ ಭರಿಸಬೇಕೆಂದು ತಿಳಿಸಿದರು.</p>.<p>ಹಾಗೆ ಬರುವ ಕಾರ್ಮಿಕರನ್ನು ಗಡಿಯಲ್ಲೇ ತಡೆದು ತಪಾಸಣೆ ನಡೆಸಬೇಕು. ನಂತರ ಅವರನ್ನು ಕಡ್ಡಾಯವಾಗಿ ಹೊಂ ಕ್ವಾರಂಟೈನ್ ಮಾಡಬೇಕೆಂದು ಡಿಸಿಎಂ ಕಾರಜೋಳ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>