ಮೈಸೂರು: ರಾಜ್ಯ ಸರ್ಕಾರವು ಇನ್ಫೊಸಿಸ್ ಜೊತೆ ಒಡಂಬಡಿಕೆ ಮಾಡಿಕೊಂಡು ಬುಧವಾರ ‘ಆಪ್ತಮಿತ್ರ ಸಹಾಯವಾಣಿ’ ಆರಂಭಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಇನ್ಫೊಸಿಸ್ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಕೇಂದ್ರದಲ್ಲಿ 2 ಸಾವಿರ ಮಂದಿ ಕಾರ್ಯನಿರ್ವಹಿಸಲಿದ್ದಾರೆ. ವೈದ್ಯಕೀಯ ಕ್ಷೇತ್ರದ ಪರಿಣತರು, ವೈದ್ಯರು, ನರ್ಸ್ಗಳು ಇರಲಿದ್ದಾರೆ. ರಾಜ್ಯದ ಯಾವುದೇ ಮೂಲೆಯಿಂದ ಜನರು ಈ ಕೇಂದ್ರಕ್ಕೆ (14410 ಸಂಖ್ಯೆ) ಕರೆ ಮಾಡಿ ಸಹಾಯ ಪಡೆಯಬಹುದು ಎಂದರು.
ನೆಗಡಿ, ಜ್ವರ, ಕೆಮ್ಮು ಇದ್ದವರು ನೆರವು ಪಡೆಯಬಹುದು. ಟೆಲಿ ಮೆಡಿಷನ್ ಸೌಲಭ್ಯವೂ ಇರಲಿದೆ. ಈ ಸಹಾಯವಾಣಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಬುಧವಾರ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.