ಮಂಗಳೂರು: ಇದೇ 12 ರಂದು ದುಬೈನಿಂದ ಮಂಗಳೂರಿಗೆ ಮರಳಿದ್ದ 15 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಒಬ್ಬರು ತೀವ್ರ ಉಸಿರಾಟದ ತೊಂದರೆಯಿಂದ (ಎಸ್ಎಆರ್ಬಿಐ) ಬಳಲುತ್ತಿದ್ದಾರೆ.
ಇವರಲ್ಲಿ ನಾಲ್ವರು ಮಹಿಳೆಯರು, ಒಬ್ಬ ಬಾಲಕ ಹಾಗೂ 10 ಪುರುಷರು ಸೇರಿದ್ದಾರೆ. ಎಲ್ಲರನ್ನೂ ವಿಮಾನ ನಿಲ್ದಾಣದಿಂದ ನೇರವಾಗಿ ಕ್ವಾರಂಟೈನ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲಾಗಿತ್ತು. ದುಬೈನಿಂದ ಬಂದ ವಿಮಾನದಲ್ಲಿ ಒಟ್ಟು 176 ಪ್ರಯಾಣಿಕರು ತಾಯ್ನಾಡಿಗೆ ಬಂದಿಳಿದಿದ್ದರು.
ಇದೀಗ ವಿಮಾನದಲ್ಲಿ ಬಂದ ಇತರ ಪ್ರಯಾಣಿಕರ ಆರೋಗ್ಯದ ಮೇಲೂ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.