<p><strong>ಬೆಂಗಳೂರು</strong>: ‘ನಗರದ 13 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದ್ದು, ಅವರ ಜೊತೆ ಸಂಪರ್ಕದಲ್ಲಿದ್ದ 420ಕ್ಕೂ ಹೆಚ್ಚು ಸಿಬ್ಬಂದಿ ಕ್ವಾರಂಟೈನ್ನಲ್ಲಿ ಇದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.</p>.<p>ಕೊರೊನಾದಿಂದಾಗಿ ಎಎಸ್ಐ ಸಾವನ್ನಪ್ಪಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಎರಡೂವರೆ ತಿಂಗಳು ಯಾವುದೇ ಸೋಂಕು ನಮ್ಮಲ್ಲಿ ಇರಲಿಲ್ಲ. ಲಾಕ್ಡೌನ್ ಸಡಿಲಿಕೆ ಬಳಿಕ ಜನ ದಟ್ಟಣೆ ಜಾಸ್ತಿಯಾಗಿದೆ. ಜನರ ಓಡಾಟವೂ ಹೆಚ್ಚಾಗಿದೆ. ಅಂತರ ರಾಜ್ಯ ನಡುವಿನ ಸಂಚಾರವೂ ಹೆಚ್ಚಾಗಿದೆ’ ಎಂದರು.</p>.<p>'ಲಾಕ್ಡೌನ್ ಸಡಿಲಿಕೆ ಬಳಿಕ ಆರೋಪಿಗಳ ಬಂಧನ, ನಿಯಂತ್ರಿತ ಪ್ರದೇಶದಲ್ಲಿ (ಕಂಟೈನ್ಮೆಂಟ್) ಭದ್ರತೆ ಕೆಲಸ ಮಾಡುವಾಗ, ಗಸ್ತು ತಿರುಗುವಾಗ ಪೊಲೀಸರಿಗೆ ಸೋಂಕು ತಗಲುತ್ತಿದೆ’ ಎಂದರು.</p>.<p>‘ಸಾವನ್ನಪ್ಪಿರುವ ಎಎಸ್ಐ ಅವರಿಗೆಆರೋಗ್ಯ ಸಮಸ್ಯೆ ಇತ್ತು. ಅವರಿಗೆ ರಜೆ ಕೂಡ ನೀಡಲಾಗಿತ್ತು. ಕರ್ತವ್ಯದಲ್ಲಿದ್ದಾಗ ಅವರಿಗೆ ಸೋಂಕು ತಗುಲಿಲ್ಲ. ಹೊರಗಡೆ ಇದ್ದಾಗ ಸೋಂಕು ತಗುಲಿದೆ’ ಎಂದರು.</p>.<p>‘ಪ್ರತಿಯೊಬ್ಬ ಪೊಲೀಸರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.ಮಾಸ್ಕ್, ಸ್ಯಾನಿಟೈಸ್ರ್, ಗ್ಲೌಸ್ ಬಳಕೆ ಮಾಡಬೇಕು. ಯಾವುದಕ್ಕೂಹೆದರುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಎಲ್ಲವನ್ನೂ ಎದುರಿಸಬೇಕು’ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ನಗರದ 13 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದ್ದು, ಅವರ ಜೊತೆ ಸಂಪರ್ಕದಲ್ಲಿದ್ದ 420ಕ್ಕೂ ಹೆಚ್ಚು ಸಿಬ್ಬಂದಿ ಕ್ವಾರಂಟೈನ್ನಲ್ಲಿ ಇದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.</p>.<p>ಕೊರೊನಾದಿಂದಾಗಿ ಎಎಸ್ಐ ಸಾವನ್ನಪ್ಪಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಎರಡೂವರೆ ತಿಂಗಳು ಯಾವುದೇ ಸೋಂಕು ನಮ್ಮಲ್ಲಿ ಇರಲಿಲ್ಲ. ಲಾಕ್ಡೌನ್ ಸಡಿಲಿಕೆ ಬಳಿಕ ಜನ ದಟ್ಟಣೆ ಜಾಸ್ತಿಯಾಗಿದೆ. ಜನರ ಓಡಾಟವೂ ಹೆಚ್ಚಾಗಿದೆ. ಅಂತರ ರಾಜ್ಯ ನಡುವಿನ ಸಂಚಾರವೂ ಹೆಚ್ಚಾಗಿದೆ’ ಎಂದರು.</p>.<p>'ಲಾಕ್ಡೌನ್ ಸಡಿಲಿಕೆ ಬಳಿಕ ಆರೋಪಿಗಳ ಬಂಧನ, ನಿಯಂತ್ರಿತ ಪ್ರದೇಶದಲ್ಲಿ (ಕಂಟೈನ್ಮೆಂಟ್) ಭದ್ರತೆ ಕೆಲಸ ಮಾಡುವಾಗ, ಗಸ್ತು ತಿರುಗುವಾಗ ಪೊಲೀಸರಿಗೆ ಸೋಂಕು ತಗಲುತ್ತಿದೆ’ ಎಂದರು.</p>.<p>‘ಸಾವನ್ನಪ್ಪಿರುವ ಎಎಸ್ಐ ಅವರಿಗೆಆರೋಗ್ಯ ಸಮಸ್ಯೆ ಇತ್ತು. ಅವರಿಗೆ ರಜೆ ಕೂಡ ನೀಡಲಾಗಿತ್ತು. ಕರ್ತವ್ಯದಲ್ಲಿದ್ದಾಗ ಅವರಿಗೆ ಸೋಂಕು ತಗುಲಿಲ್ಲ. ಹೊರಗಡೆ ಇದ್ದಾಗ ಸೋಂಕು ತಗುಲಿದೆ’ ಎಂದರು.</p>.<p>‘ಪ್ರತಿಯೊಬ್ಬ ಪೊಲೀಸರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.ಮಾಸ್ಕ್, ಸ್ಯಾನಿಟೈಸ್ರ್, ಗ್ಲೌಸ್ ಬಳಕೆ ಮಾಡಬೇಕು. ಯಾವುದಕ್ಕೂಹೆದರುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಎಲ್ಲವನ್ನೂ ಎದುರಿಸಬೇಕು’ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>