ಕಾಂಗ್ರೆಸ್ನಲ್ಲಿ ಬೇಸತ್ತಿದ್ದೇನೆ ಎಂದು ನಮ್ಮ ಪಕ್ಷ ಸೇರಿದರು. ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದರಿಂದ ಅವರಿಗೆ ಟಿಕೆಟ್ ನೀಡಲಾಯಿತು. ಆದರೆ ಈಗ ಅವರು ವಿದ್ರೋಹ ಮಾಡಿದರು. ಇದೇ ಕುತ್ಸಿತ ಉದ್ದೇಶದಿಂದಲೇ ಬಿಜೆಪಿ ಸೇರಿರಬಹುದು. ಅವರಿಗೆ ರಾಮನಗರದ ಜನ ಮತ್ತು ದೇವರು ಕ್ಷಮಿಸುವುದಿಲ್ಲ. ಅವರ ರಾಜಕೀಯ ಭವಿಷ್ಯವೂ ಇಲ್ಲಿಗೆ ಮುಗಿಯುತ್ತದೆ ಎಂದರು.