ಮೆರವಣಿಗೆ ನಂತರ ಮಹಿಳೆಯರು, ದತ್ತ ಭಕ್ತರು ವಾಹನಗಳಲ್ಲಿ ಇನಾಂ ದತ್ತ (ಐ.ಡಿ) ಪೀಠಕ್ಕೆ ತೆರಳಿದರು. ಗುರು
ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ ಮಾಡಿದರು. ದತ್ತಪೀಠದ ಬಳಿಯ ಸಭಾಂಗಣದಲ್ಲಿ ಪೂಜೆ, ಹೋಮ ನೆರವೇರಿದವು. ನಗರ, ಗಿರಿಶ್ರೇಣಿ ಮಾರ್ಗ, ಬಾಬಾಬುಡನ್ ಗಿರಿಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.