ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ನೀಲಮ್ಮ ಮಾತನಾಡಿ,' ಬುಧವಾರ ರಾತ್ರಿ ಅಬ್ದುಲ್ ರೆಹಮಾನ್ ಹೆಸರಿನ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತ ವ್ಯಕ್ತಿಗೆ ಚಿಕಿತ್ಸೆ ನೀಡುವಂತೆ ಮುಸ್ಲಿಂ ಯುವಕರ ಗುಂಪು ರಾತ್ರಿ ಪಾಳಿಯ ವೈದ್ಯಾಧಿಕಾರಿ ಮತ್ತು ಆರೋಗ್ಯ ಸಿಬ್ಬಂದಿಗೆ ಧಮಕಿ ಹಾಕಿದ್ದಾರೆ. ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದರೂ, ಯುವಕರ ಗುಂಪು ಆಸ್ಪತ್ರೆಯಲ್ಲಿ ದೊಂಬಿ ನಡೆಸಿದೆ' ಎಂದು ಆರೋಪಿಸಿದರು.