ಉಕ್ಕು, ಸಿಮೆಂಟ್, ಕಾಗದ, ಪೆಟ್ರೋಲಿಯಂ, ರಸಗೊಬ್ಬರ, ಗಾಜು, ಕಲ್ಲಿದ್ದಲು ಮುಂತಾದ ಕ್ಷೇತ್ರದ ಉದ್ಯಮಗಳಿಗೆ ಇದರಿಂದ ವಿನಾಯ್ತಿ ದೊರೆತಿದೆ. ಆದರೆ, ಕೊವಿಡ್– 19 ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ವಿನಾಯ್ತಿಯು ಕಾರ್ಖಾನೆಗಳ ಕಾರ್ಯಾಚರಣೆಗೆ ಮಾತ್ರ ಅನ್ವಯ. ಇವುಗಳ ಪ್ರಧಾನ ಕಚೇರಿ ಮತ್ತು ಆಡಳಿತ ವಿಭಾಗಕ್ಕೆ ಅನ್ವಯಿಸುವುದಿಲ್ಲ.